Select Your Language

Notifications

webdunia
webdunia
webdunia
webdunia

ಅಂಬರೀಷ್ ಹೇಳಿಕೆಗೆ ಟಾಂಗ್ ನೀಡಿದ ಆಂಜನೇಯ

ಅಂಬರೀಷ್ ಹೇಳಿಕೆಗೆ ಟಾಂಗ್ ನೀಡಿದ ಆಂಜನೇಯ
ಬೆಂಗಳೂರು , ಶನಿವಾರ, 29 ನವೆಂಬರ್ 2014 (14:47 IST)
ನಿಗಮ, ಮಂಡಳಿಯಲ್ಲಿ ಸಿಎಂ ತೆಗೆದುಕೊಂಡ ನಿರ್ಧಾರವನ್ನು ಸಚಿವ ಆಂಜನೇಯ ಸಮರ್ಥಿಸಿಕೊಂಡಿದ್ದು, ಸಚಿವ ಅಂಬರೀಷ್ ಅವರ ಟೀಕೆಗೆ ಟಾಂಗ್ ನೀಡಿದ್ದಾರೆ. 

ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣರು. ಕಾಂಗ್ರೆಸ್‌ನಲ್ಲಿ  ಹಿರಿಯರು ಕಿರಿಯರು ಎಂಬುದಿಲ್ಲ ಎಲ್ಲರೂ ಕಾಂಗ್ರೆಸ್ಸಿಗರೇ. ಕಾಂಗ್ರೆಸ್‌ನಲ್ಲಿ ಅವರ ಬೆಂಬಲಿಗರು, ಇವರ ಬೆಂಬಲಿಗರು ಎಂಬುದಿಲ್ಲ.

ಸಚಿವ ಅಂಬರೀಷ್ ಕೂಡ ನಮ್ಮ ನಾಯಕರೇ. ಎಲ್ಲರೊಂದಿಗೆ ಚರ್ಚಿಸಿ ನಿಗಮ, ಮಂಡಳಿಗೆ ನೇಮಕ ಮಾಡಲಾಗಿದೆ  ಎಂದು ಸಚಿವ ಆಂಜನೇಯ ಅವರು  ಹೇಳಿದ್ದಾರೆ. ಅಂಬರೀಷ್ ಕೂಡ ನಮ್ಮ ನಾಯಕರೇ, ಅವರನ್ನು ಕಡೆಗಣಿಸಿದ್ದಾರೆಂಬ ಭಾವನೆ ಕೂಡ ಸರಿಯಿಲ್ಲ. 

 ನಿಗಮ, ಮಂಡಳಿಗೆ ಸ್ಥಾನ ನೀಡಿರುವುದು ಸೋನಿಯಾ ಮತ್ತು ರಾಹುಲ್ ಜೊತೆ ಚರ್ಚಿಸಿ ತೆಗೆದುಕೊಂಡ ನಿರ್ಧಾರ ಎಂದು ಸಚಿವ ಆಂಜನೇಯ ಹೇಳಿದರು.  ಸಚಿವ ಅಂಬರೀಶ್ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು ಮಾತನಾಡುತ್ತಿದ್ದರು.

ನಿಗಮ, ಮಂಡಳಿಗೆ ನೇಮಕ ಮಾಡುವಾಗ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ತಾವು ಸಿದ್ದರಾಮಯ್ಯ ಅವರಿಗಿಂತ ಕಾಂಗ್ರೆಸ್‌ನಲ್ಲಿ ಹಿರಿಯರು ಎಂದು ಅಂಬರೀಶ್ ಹೇಳಿದ್ದರು. 

Share this Story:

Follow Webdunia kannada