Select Your Language

Notifications

webdunia
webdunia
webdunia
webdunia

ಅನಂತಮೂರ್ತಿ "ಚಿಂತನೆಗಳ ಸಾಗರ" ಸಿಎಂ ಬಣ್ಣನೆ

ಅನಂತಮೂರ್ತಿ
ಬೆಂಗಳೂರು , ಶನಿವಾರ, 23 ಆಗಸ್ಟ್ 2014 (12:02 IST)
ಸಾಹಿತ್ಯದ ದಿಗ್ಗಜ ಅನಂತಮೂರ್ತಿ ನಿಧನದಿಂದ ರಾಜ್ಯ ಸಾಹಿತ್ಯ ಪ್ರಪಂಚಕ್ಕೆ ಅಪಾರ ನಷ್ಟವಾಗಿದ್ದು, ಅವರನ್ನು ಚಿಂತನೆಗಳ ಸಾಗರ ಎಂದು ಸಿಎಂ ಸಿದ್ದರಾಮಯ್ಯ ಅನಂತಮೂರ್ತಿ ನಿಧನಕ್ಕೆ ಶೋಕ ಸೂಚಿಸಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ ನವ್ಯ ಚಳವಳಿಯ ಪ್ರವರ್ತಕ ಎಂದು ಅನಂತಮೂರ್ತಿಯನ್ನು ನೆನಪಿಸಿದ ಸಿದ್ದರಾಮಯ್ಯ, ಸಾಹಿತಿಗಳಿಗೆ ಸಾಮಾಜಿಕ ಜವಾಬ್ದಾರಿಇರಬೇಕು ಎಂದು ಸಲಹೆ ನೀಡುತ್ತಿದ್ದ ಅವರು, ಸಾರ್ವಜನಿಕ ಹಿಸಾಸಕ್ತಿಯ ಯಾವುದೇ ವಿಷಯವಾಗಿರಲಿ, ಧ್ವನಿ ಎತ್ತುತ್ತಿದ್ದರು ಎಂದು ನುಡಿದಿದ್ದಾರೆ.

ಅನಂತಮೂರ್ತಿ ನೈಜ ಸಮಾಜವಾದಿ ಮತ್ತು ಬುದ್ಧಿಜೀವಿ, ವಿವಿಧ ವಿಷಯಗಳ ಬಗ್ಗೆ ಅವರ ವಿಶಿಷ್ಟ ಅಭಿಪ್ರಾಯ ಮತ್ತು ಭಿನ್ನವಾಗಿ ವಿಶ್ಲೇಷಿಸುವ ರೀತಿಯಿಂದ ಚಿಂತನೆಗಳ ಸಾಗರವಾಗಿದ್ದರು ಎಂದು ಸಿಎಂ ಪ್ರತಿಪಾದಿಸಿದರು. ಕನ್ನಡ ಸಾಹಿತ್ಯದ ನಿಜವಾದ ರಾಯಭಾರಿ, ಅವರ ನಿಧನದಿಂದ ಕನ್ನಡ ಸಾಹಿತ್ಯ ಬಡವಾಗಿದೆ ಎಂದು ಹೇಳಿದರು. 
 

Share this Story:

Follow Webdunia kannada