Webdunia - Bharat's app for daily news and videos

Install App

ಸಕಲ ಸರ್ಕಾರಿ ಗೌರವದೊಂದಿಗೆ ಸಾಹಿತಿ ಅನಂತಮೂರ್ತಿ ಅಂತ್ಯಕ್ರಿಯೆ

Webdunia
ಶನಿವಾರ, 23 ಆಗಸ್ಟ್ 2014 (16:18 IST)
ಸಾಹಿತ್ಯ ದಿಗ್ಗಜ ಅನಂತಮೂರ್ತಿ ಅವರ ಪಾರ್ಥಿವ ಶರೀರಕ್ಕೆ ಬೆಂಗಳೂರಿನ ಜ್ಞಾನಭಾರತಿಯ ಕಲಾಗ್ರಾಮದಲ್ಲಿ  ಹಿರಿಯ ಪುತ್ರ ಶರತ್  ಅಗ್ನಿ ಸ್ಪರ್ಷ ಮಾಡಿದರು . ಅನಂತಮೂರ್ತಿ ಅವರು ಪಂಚಭೂತಗಳಲ್ಲಿ ಲೀನವಾದರು. ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ ದಿಗ್ಗಜ ತೆರೆಮರೆಗೆ ಸರಿದರು. ಸಾಹಿತ್ಯ ಲೋಕದ ಮಾಣಿಕ್ಯ ಮರೆಯಾಯಿತು.

ಬೆಂಗಳೂರು ಜ್ಞಾನಭಾರತಿಯಲ್ಲಿರುವ ಕಲಾಗ್ರಾಮದಲ್ಲಿ  ಅನಂತಮೂರ್ಸತಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಲಾಗಿದ್ದು, ಕಲಾಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಮಡುಗಟ್ಟಿದ ಶೋಕದ ನಡುವೆ  ಪೊಲೀಸ್ ಬ್ಯಾಂಡ್‌ನಲ್ಲಿ ರಾಷ್ಟ್ರಗೀತೆ ಮೊಳಗಿತು. ಕುಶಾಲ ತೋಪು ಹಾರಿಸಿ ಗೌರವ ಸಲ್ಲಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೂ ಅವಕಾಶ ನೀಡಲಾಗಿತ್ತು. ಬ್ರಾಹ್ಮಣ ಮಾಧ್ವ ಪದ್ಧತಿ ಪ್ರಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.

50 ಕೆಜಿ ಶ್ರೀಗಂಧ, 75 ಕೆಜಿ ತುಪ್ಪ, 25,000 ರೂ. ಹೂವು, 20 ಕೆಜಿ ಕೊಬ್ಬರಿ, 2 ಮೂಟೆ ಬೆರಣಿಯನ್ನು ಅಂತ್ಯಸಂಸ್ಕಾರಕ್ಕೆ ಬಳಸಲಾಗಿತ್ತು. ಸಿಎಂ ಸಿದ್ದರಾಮಯ್ಯ, ವಸತಿ ಸಚಿವ ಅಂಬರೀಷ್ ಮುಂತಾದ ಗಣ್ಯರು ಅನಂತಮೂರ್ತಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು..

ಸಾಲುಮರದ ತಿಮ್ಮಕ್ಕ ಪುಷ್ಪಾಂಜಲಿ ಅರ್ಪಿಸಿದರು. .  13-14 ಜನ ಪುರೋಹಿತರು ಅಂತಿಮ ಸಂಸ್ಕಾರದ ಮಂತ್ರಘೋಷಗಳನ್ನು ಹೇಳಿದರು. ಅನಂತಮೂರ್ತಿ ಹಿರಿಯ ಪುತ್ರ ಶರತ್  ಚಿತೆಗೆ ಅಗ್ನಿ ಸ್ಪರ್ಷ ಮಾಡಿ, ಅನಂತಮೂರ್ತಿ ಪಂಚಭೂತಗಳಲ್ಲಿ ಲೀನವಾದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments