Select Your Language

Notifications

webdunia
webdunia
webdunia
webdunia

ಅನಂತಮೂರ್ತಿ ಸ್ಥಿತಿ ವಿಷಮ: ಲಘು ಹೃದಯಾಘಾತ

ಅನಂತಮೂರ್ತಿ ಸ್ಥಿತಿ ವಿಷಮ: ಲಘು ಹೃದಯಾಘಾತ
ಬೆಂಗಳೂರು , ಶುಕ್ರವಾರ, 22 ಆಗಸ್ಟ್ 2014 (18:36 IST)
ಕಿಡ್ನಿ ವೈಫಲ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೇರಿರುವ ಅನಂತಮೂರ್ತಿ ಅವರ ಆರೋಗ್ಯ ಸ್ಥಿತಿ ವಿಷಮಿಸಿದ್ದು ಲಘು ಹೃದಯಾಘಾತವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅನಂತಮೂರ್ತಿ ಅವರ ಹೃದಯ ಬಡಿತವನ್ನು ಸುಸ್ಥಿತಿಯಲ್ಲಿಡಲು ತೀವ್ರ ಪ್ರಯತ್ನವನ್ನು ವೈದ್ಯರು ನಡೆಸಿದ್ದು, ವೆಂಟಿಲೇಟರ್ ಚಿಕಿತ್ಸೆ ನೀಡಲಾಗುತ್ತಿದೆ.

ಮಣಿಪಾಲ್ ಆಸ್ಪತ್ರೆಯ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಣಿಪಾಲ್ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಸುದರ್ಶನ್ ಬಲ್ಲಾಳ್ ನೇತೃತ್ವದಲ್ಲಿ ಅನಂತಮೂರ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅನಂತಮೂರ್ತಿ ಅವರು ಇದಕ್ಕೆ ಮುಂಚೆ ಕಿಡ್ನಿ ವೈಫಲ್ಯದಿಂದಾಗಿ ಡಯಾಲಿಸಿಸ್ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದರು. ಕಿಡ್ನಿ ವೈಫಲ್ಯದಿಂದ ಹೃದಯ ಸಮಸ್ಯೆ ಕೂಡ ಅವರಿಗೆ ಕಾಣಿಸಿಕೊಂಡಿತ್ತು. 

Share this Story:

Follow Webdunia kannada