Webdunia - Bharat's app for daily news and videos

Install App

ಒಂದೇ ವರ್ಷದಲ್ಲಿ ಆರು ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳ ಜೀವನ ಉಳಿಸಿದ ಸಂಸ್ಥೆ

Webdunia
ಶನಿವಾರ, 11 ಡಿಸೆಂಬರ್ 2021 (19:58 IST)
ಹಿಂದಿನಿಂದಲೂ ನಮ್ಮಲ್ಲಿ ಬಾಲ್ಯ ವಿವಾಹದ ಪದ್ಧತಿ ಕೇಳಿದ್ದೇವೆ.. ಕೆಲವೊಮ್ಮೆ ನೋಡಿದ್ದೇವೆ ಕೂಡ. ಕೋವಿಡ್ ಕಾರಣದಿಂದ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಬಾಲ್ಯದ ಕನಸನ್ನು ಸುಟ್ಟು ಹಾಕಿ ಮದುವೆಯ ಜೀವನಕ್ಕೆ ಕಾಲಿಟ್ಟಿದ್ದಾರೆ.
‘ಹಮಾರಿ ಬಚ್ಪನ್ ಟ್ರಸ್ಟ್’- ಇಂತಹದ್ದೇ ಬಾಲ್ಯ ವಿವಾಹ, ಮಹಿಳೆಯರ ಆರ್ಥಿಕ ಸಮಸ್ಯೆಗಳ ವಿರುದ್ಧ ಹೋರಾಡಿ ಸಾವಿರಾರು ಹೆಣ್ಣುಮಕ್ಕಳ ಜೀವನ ಉಳಿಸಿದ ಸಂಸ್ಥೆಯ ಯಶೋಗಾಥೆ ಇದು.
ಮಧುಮಿತ, 10ನೇ ತರಗತಿಯ ವಿದ್ಯಾರ್ಥಿನಿ. ಮೂಲತಃ ಒಡಿಶಾದ ರೋರ್ಕೆಲಾ ಎಂಬ ಗ್ರಾಮದವಳು. ಕೋವಿಡ್ ಮಾರಿ ತಟ್ಟಿದಾಗ ಆರ್ಥಿಕವಾಗಿ ಹೊಡೆತ ಅನುಭವಿಸಿದ್ದ ಮಧುಮಿತ ಕುಟುಂಬ ಆಕೆಯ ಮದುವೆ ಮಾಡಲು ತೀರ್ಮಾನಿಸಿದರು. ಆದರೆ ಇದನ್ನು ನಿರಾಕರಿಸಲು ಸಹಾಯ ಮಾಡಿದ್ದು ಇದೇ ಸಂಸ್ಥೆ.
ನವೆಂಬರ್ 2020ರಿಂದ ಜುಲೈ 2021ರ ವೇಳೆಗೆ 3,024 ಕ್ಕೂ ಹೆಚ್ಚು ಬುಡಕಟ್ಟು ಮಹಿಳೆಯರನ್ನು ರಕ್ಷಿಸಿದೆ. ಮಹಿಳೆಯರಿಗೆ ಕೌಶಲ್ಯ ತರಬೇತಿ, ಮಾನಸೀಕ ಸಾಮರ್ಥ್ಯ ಹೆಚ್ಚಿಸುದುವುದನ್ನು ಕಲಿಸುತ್ತಿದೆ.
ಇಲ್ಲಿ ಮಹಿಳೆಯರಿಗೆ ತರಬೇತಿ, ಸೇವಿಂಗ್ಸ್, ವೃತ್ತಿಪರ ಕೌಶಲ್ಯ, ಕೃಷಿ ಸೇರಿದಂತೆ ಆರ್ಥಿಕವಾಗಿ ಸಬಲಗೊಳಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಮುನ್ನುಗ್ಗುಯತ್ತಿದೆ.
ಜಿಲ್ಲಾಡಳಿತದ ಸಹಯೋಗದೊಂದಿಗೆ ಜನಾಭಿವೃದ್ಧಿಗೆಂದು ರೂಪುಗೊಂಡಿರುವ ಈ ಸಂಸ್ಥೆ 2020-2021ರ ನಡುವೆ 6,077 ಹೆಣ್ಣು ಮಕ್ಕಳನ್ನು ರಕ್ಷಿಸಿದೆ. ಅಷ್ಟೇ ಅಲ್ಲ ಈ ಮಕ್ಕಳಿಗೆ ಅಗತ್ಯವಿರುವ ಸಂವಹನೆ, ಋತುಚಕ್ರದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಮಕ್ಕಳಿಗೆ ನಾಯಕತ್ವದ ಕೌಶಲ್ಯ, ಸಮಯ ನಿರ್ವಗಣೆ, ಒತ್ತಡದ ಬಗ್ಗೆ ಕಲಿಸಲಾಗುತ್ತಿದೆ.
ಹೆಣ್ಣು ಮಕ್ಕಳ ಶೋಷಣೆ ನಿಲ್ಲಿಸಲು ಶ್ರಮಿಸಿ, ಅವರಿಗೆ ವಿದ್ಯಾಭ್ಯಾಸ ಒದಗಿಸುತ್ತಿರುವ ಇಂತಹ ಲಕ್ಷಾಂತರ ಸಂಸ್ಥೆಗಳು ನಮ್ಮ ಸುತ್ತಮುತ್ತ ಇರುತ್ತವೆ. ಅಂತಹ ಸಂಸ್ಥೆಯಲ್ಲಿ ಶ್ರಮಿಸುತ್ತಿರುವವರಿಗೆ ನಮ್ಮದೊಂದು ಸಲಾಮ್.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments