ಅಮಿತ್ ಶಾ ಎಲೆಕ್ಷನ್ ಗಿಮಿಕ್: ಸಿದ್ದಗಂಗಾ ಮಠಕ್ಕೆ ನೆಪಮಾತ್ರ ಭೇಟಿ

Webdunia
ಸೋಮವಾರ, 26 ಮಾರ್ಚ್ 2018 (13:35 IST)
ಮುಂಬರುವ ವಿಧಾನ ಸಭಾ ಚುನಾವಣೆ ಗುರಿಯಾಗಿಸಿಕೊಂಡು  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಆದರೆ ಭಾರತ ರತ್ನ ಪ್ರಶಸ್ತಿಗೆ ಬಗ್ಗೆ ಯಾವ‌ ಪ್ರಸ್ತಾಪ‌ ಮಾಡಲಿಲ್ಲ. ಕೇವಲ ಚುನಾವಣೆ ಗುರಿಯಾಗಿಸಿಕೊಂಡು ನೆಪ‌ ಮಾತ್ರಕ್ಕೆ 1೦  ನಿಮಿಷಗಳ ಕಾಲ ಮಾತುಕತೆ ನಡೆಸಿದರು. 
ಅಮಿತ್ ಶಾ ನೋಡಲು ಆಗಮಿಸಿದ್ದ ಬಿಜೆಪಿ ನಾಯಕರಿಗೂ ತೀವ್ರ ಮುಜುಗರ ಉಂಟಾಯಿತು.‌ ಮಾಜಿ ಸಚಿವ ಸೊಗಡು ಶಿವಣ್ಣ ಬೆಂಬಲಿಗರು ಮಠದ ಒಳಗೆ ಬಿಟ್ಟಿಲ್ಲ ಎಂದು ಪ್ರತಿಭಟನೆ ನಡೆಸಿದರು. ಶಾ ಆಗಮನದಿಂದ ಒಂದಾಗಬೇಕಾಗಿದ್ದ ಸ್ಥಳೀಯ ಬಿಜೆಪಿ ನಾಯಕರು ಮತ್ತಷ್ಟು ದೂರದಾರು ಎನ್ನಬಹುದು. 
 
ಏಪ್ರಿಲ್ 1 ಕ್ಕೆ ಶ್ರೀಗಳ 111 ನೇ ಹುಟ್ಟುಹಬ್ಬವಿದ್ದು  ಈ ಬಾರಿಯಾದರೂ ಶ್ರೀಗಳಿಗೆ ಭಾರತ ರತ್ನ ನೀಡಬಹುದು, ಆ ಬಗ್ಗೆ ಬಿಜೆಪಿ ನಾಯಕರು ಅಮಿತ್ ಶಾ ಮೂಲಕ ಕೇಂದ್ರ ಸರ್ಕಾರ ಕ್ಕೆ ಒತ್ತಡ ಹಾಕಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಅಮಿತ್ ಶಾ ಬೇಟಿ ಸಂಪೂರ್ಣ ಚುನಾವಣಾ ಗಿಮಿಕ್ ಆಗಿ ಮಾರ್ಪಟ್ಟಿತ್ತು.
 
ಶ್ರೀ ಗಳ ಭೇಟಿ‌ ಬಳಿಕ ಅಮಿತ್ ಶಾ ಹೇಳಿಕೆ.
 
ಶ್ರೀ ಗಳನ್ನ ಭೇಟಿ ಮಾಡಿರುವುದು ತುಂಬಾ ಖುಷಿ ಯಾಗಿದೆ‌.ಈ ವಯಸ್ಸಿನಲ್ಲಿ ಇಷ್ಟೋಂದು ಸಂಸ್ಥೆ ಗಳನ್ನು ನಡೆಸುತ್ತಿರುದು ಆಶ್ಚರ್ಯಕರ ವಾಗಿದೆ. ಇದು ಚುನಾವಣೆ ಸಮಯವಾದ ಕಾರಣ ಶ್ರೀ ಗಳ ಭೇಟಿ ನಮ್ಮ ಪಕ್ಷಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೇ ಗುರುವಾರ, ಶುಕ್ರವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಗಲ್ಲ

ಬೆಳಗಾವಿ ಕೃಷ್ಣಮೃಗ ಸಾವು ಪ್ರಕರಣ, ಬಂತು ಪ್ರಯೋಗಾಲಯದ ವರದಿ

60 ಅಡಿ ಆಳದ ಕಾಲುವೆಗೆ ಬಿದ್ದ ಕಾಡಾನೆ, ಕಾರ್ಯಚರಣೆ ಹೇಗೆ ನಡೆದಿತ್ತು ಗೊತ್ತಾ

ಸಹಾಯ ಕೇಳಲು ಬಂದ ಯುವತಿಗೆ ಲೈಂಗಿಕ ದೌರ್ಜನ್ಯ, ಕೋರ್ಟ್‌ಗೆ ಹಾಜರಾಗಲು ಬಿಎಸ್‌ವೈಗೆ ಸಮನ್ಸ್‌

ಸೂಸೈಡ್ ಬಾಂಬರ್ ದಾರಿ ತಪ್ಪಿದ ಮಗ: ಕಾಂಗ್ರೆಸ್ ಸಂಸದನ ಹೇಳಿಕೆ ಕೇಳಿದ್ರೆ ಶಾಕ್

ಮುಂದಿನ ಸುದ್ದಿ
Show comments