ಮಧ್ಯೆ ಕರ್ನಾಟಕದಲ್ಲಿ ಪ್ರವಾಹ; ಸ್ನಾನಘಟ್ಟ ಮುಳುಗಡೆ, ಸಂಚಾರ ಬಂದ್

Webdunia
ಬುಧವಾರ, 7 ಆಗಸ್ಟ್ 2019 (16:23 IST)
ಮಹಾ ಮಳೆಗೆ ಪ್ರವಾಹ ಭೀತಿ ತಲೆದೋರಿದ್ದು, ಜನರು ಪರದಾಡುವಂತಾಗಿದೆ. ಏತನ್ಮಧ್ಯೆ ರಸ್ತೆಗಳ ಮೇಲೆ ನದಿಯಂತೆ ನೀರು ಹರಿಯುತ್ತಿರೋದ್ರಿಂದ ಅಲ್ಲಲ್ಲಿ ವಾಹನ ಸಂಚಾರ್ ಬಂದ್ ಆಗಿದೆ.

ತುಂಗಾಭದ್ರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಹೊನ್ನಾಳಿ, ಹರಿಹರ, ಹರಪನಹಳ್ಳಿ ತಾಲ್ಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಹೊನ್ನಾಳಿ ಪಟ್ಟಣದ ಸಮೀಪ 10.26 ಮೀಟರ್ ತಲುಪಿದೆ ನೀರಿನ ಮಟ್ಟ. ಅಪಾಯದ ಮಟ್ಟ 12 ಮೀಟರ್ ಮೀರಿದ್ರೆ ಹೊನ್ನಾಳಿ ಪಟ್ಟಣಕ್ಕೆ ನೀರು ನುಗ್ಗುವ ಸಾಧ್ಯತೆ ದಟ್ಟವಾಗಿದೆ. ಹೊನ್ನಾಳಿ ಬಾಲ್ ರಾಜ್ ಘಾಟ್  ನ 59  ಜನರಿಗೆ  ಗಂಜಿಕೇಂದ್ರ ಸ್ಥಾಪನೆ ಮಾಡಲಾಗಿದೆ.  
ಹೊನ್ನಾಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ  ಗಂಜಿಕೇಂದ್ರ ಸ್ಥಾಪನೆ ಆಗಿದೆ.

ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿ ಕ್ಷೇತ್ರದ ದೇವಾಲಯದ ಸ್ನಾನಘಟ್ಟಗಳು ನದಿ ನೀರಿನಲ್ಲಿ ಮುಳುಗಡೆಯಾಗಿವೆ.

ಉಕ್ಕಡಗಾತ್ರಿ ಪತ್ಯಾಪುರ ಮಾರ್ಗದ ಸೇತುವೆ ಬಂದ್ ಆಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ದ್ವೀಪದಂತಾಗಿದೆ ಉಕ್ಕಡಗಾತ್ರಿ. ಸುತ್ತಮುತ್ತಾ ನೂರಾರು ಎಕರೆ ಬೆಳೆ ಮುಳುಗಡೆಯಾಗಿದೆ. ಹರಿಹರ ತಾಲ್ಲೂಕಿನ  ಸಾರಥಿ - ಚಿಕ್ಕಬಿದರೆ ರಸ್ತೆ ಸಂಪರ್ಕವು ಕಡಿತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಜಿತ್‌ ಕನಸು ಈಡೇರಿಸುತ್ತೀರೆಂಬ ನಂಬಿಕೆಯಿದೆ: ಸುನೇತ್ರಾಗೆ ಮೋದಿ ಶುಭಾಶಯ

ಮಮತಾ ಬ್ಯಾನರ್ಜಿ ವಂದೇ ಮಾತರಂಗೆ ವಿರೋಧಿಸುವುದಕ್ಕೆ ಇದೇ ಕಾರಣ ಎಂದ ಅಮಿತ್ ಶಾ

ಸಿಜೆ ರಾಯ್ ಆತ್ಮಹತ್ಯೆ ಪ‍್ರಕರಣ, ತನಿಖೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ

ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದ ಸುನೇತ್ರಾ ಪವಾರ್

ನಿಪಾ ವೈರಸ್ ತಗುಲಿದ್ದ ನರ್ಸ್‌ಗಳಿಬ್ಬರ ಸ್ಥಿತಿ ಈಗ ಹೇಗಿದೆ ಗೊತ್ತಾ

ಮುಂದಿನ ಸುದ್ದಿ
Show comments