Select Your Language

Notifications

webdunia
webdunia
webdunia
webdunia

ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಅಂಬಿ

ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಅಂಬಿ
ಮೈಸೂರು , ಶನಿವಾರ, 1 ಆಗಸ್ಟ್ 2015 (15:32 IST)
ರಾಜ್ಯದ ವಸತಿ ಸಚಿವ, ಸ್ಯಾಂಡಲ್‌ವುಡ್‌ನ ಹಿರಿಯ ನಟ ಅಂಬರೀಶ್ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 
 
ರೊಟೀನ್ ಚೆಕಪ್‌ಗಾಗಿ ನಗರದ ವಿಕ್ರಂ ಆಸ್ಪತ್ರೆಗೆ ನಿನ್ನೆ ಭೇಟಿ ನೀಡಿ ಪರೀಕ್ಷೆಗೊಳಪಟ್ಟಿದ್ದ ಅವರು, ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. 
 
ವೈದ್ಯರ ಪ್ರಕಾರ, ಅಂಬರೀಶ್ ಪ್ರಸ್ತುತ ಪ್ರತಿನಿತ್ಯದಂತೆಯೇ ಆರೋಗ್ಯವಾಗಿದ್ದು, ಯಾವ ಸಮಸ್ಯೆಯೂ ಇಲ್ಲ. ಆದ್ದರಿಂದ ಇಂದೇ ಡಿಸ್‌ಚಾರ್ಜ್ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಅಂಬರೀಶ್, ರೊಟೀನ್ ಚೆಕಪ್‌ಗಾಗಿ ನಿನ್ನೆ ಸಂಜೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

Share this Story:

Follow Webdunia kannada