Webdunia - Bharat's app for daily news and videos

Install App

ಕುಮಾರಸ್ವಾಮಿ ಆಯ್ತು, ಇನ್ನು ಬಿಎಸ್ ವೈ ಜೀವನಚರಿತ್ರೆಯೂ ಸಿನಿಮಾ!

Webdunia
ಶನಿವಾರ, 20 ಮೇ 2017 (07:39 IST)
ಬೆಂಗಳೂರು: ಇತ್ತೀಚೆಗಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಬಗ್ಗೆ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಇದೀಗ ಕುಮಾರಸ್ವಾಮಿ ಪ್ರತಿಸ್ಪರ್ದಿ ಬಿಎಸ್ ಯಡಿಯೂರಪ್ಪ ಸರದಿ!

 
ಹೌದು. ಬಿಎಸ್ ವೈ ಬಗ್ಗೆ ಸಿನಿಮಾವೊಂದನ್ನು ಬಿಜೆಪಿ ಕಾರ್ಯಕರ್ತರೇ ನಿರ್ಮಿಸಲಿದ್ದು, ಇದರಲ್ಲಿ 20 ತಿಂಗಳ ಮೈತ್ರಿ ಸರ್ಕಾರದಲ್ಲಿ ಏನೇನಾಗಿತ್ತು ಎಂದು ವಿವರಿಸಲಿದ್ದಾರಂತೆ. ಅಲ್ಲಿಗೆ ಎಲ್ಲಾ ಆಯ್ತು ಸಿನಿಮಾದಲ್ಲೂ ರಾಜಕೀಯ ಮಂದಿಯ ಫೈಟ್ ಶುರು ಎಂದಾಯ್ತು.

ಈ ವಿಷಯವನ್ನು ಸ್ವತಃ ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ತಿಳಿಸಿದ್ದಾರೆ. ಕುಮಾರಸ್ವಾಮಿ ಭೂಮಿಪುತ್ರ ಎಂಬ ಸಿನಿಮಾ ಮಾಡುತ್ತಿದ್ದರೆ, ಬಿಎಸ್ ವೈ ಸಿನಿಮಾಗೆ ಬಿಎಸ್ ವೈ ಅಥವಾ ಭೂಮಿಪುತ್ರ ಜನಕ ಬಿಎಸ್ ವೈ ಎಂದು ಹೆಸರಿಡಲಾಗುವುದಂತೆ!

ಕುಮಾರಸ್ವಾಮಿ ಪಾತ್ರ ಮಾಡುವುದಕ್ಕೆ ಅರ್ಜುನ್ ಸರ್ಜಾ ಪಕ್ಕಾ ಆಗಿದ್ದಾರೆ. ಆದರೆ ಬಿಎಸ್ ವೈ ಸಿನಿಮಾದ ಪಾತ್ರ ಯಾರು ಮಾಡುತ್ತಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments