Webdunia - Bharat's app for daily news and videos

Install App

ಡಿ ಕೆ ರವಿ ಅಣ್ಣನ ಮಗನನ್ನು ದತ್ತು ಪಡೆದ ಆದಿಚುಂಚನಗಿರಿ ಮಠ

Webdunia
ಮಂಗಳವಾರ, 24 ಮಾರ್ಚ್ 2015 (11:17 IST)
ನಿಗೂಢ ರೀತಿಯಲ್ಲಿ ಸಾವನನ್ನಪ್ಪಿದ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಹೋದರ ಡಿ.ಕೆ.ರಮೇಶ್‌ ರವರ ಪುತ್ರ ರೋಹನ್ ಗೌಡ ನನ್ನು ದತ್ತು ಪಡೆಯಲು ಆದಿಚುಂಚನಗಿರಿ ಮಠ ನಿರ್ಧರಿಸಿದ್ದು, ಆತನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಮಠವೇ ಭರಿಸಲಿದೆ.
 
ಸೋಮವಾರ ಮಠದ ವತಿಯಿಂದ ಡಿಕೆ ರವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡುತ್ತಿದ್ದ ಅದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ರವಿ ಅಣ್ಣ ರಮೇಶ್‌ರವರ ಮಗನ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಮಠ ನೋಡಿಕೊಳ್ಳಲಿದೆ. ಆತನಿಗೆ ಉತ್ತಮ ಶಿಕ್ಷಣವನ್ನು ನೀಡುವ ಹೊಣೆ ನಮ್ಮದು. ರೋಹನ್‌ನನ್ನು ದತ್ತು ಪಡೆದು ಐಎಎಸ್ ಓದಿಸಿ ರವಿ ಅವರಂತೆ ದಕ್ಷ ಅಧಿಕಾರಿಯಾಗಿಸುತ್ತೇವೆ ಎಂದು ಹೇಳಿದ್ದಾರೆ.  
 
ರವಿ ಕಡು ಬಡತನದಲ್ಲೂ ಕಷ್ಟಪಟ್ಟು ಓದಿ ಮುಂದೆ ಬಂದರು. ಅಲ್ಲದೇ ಪ್ರಾಮಾಣಿಕತೆ, ದಕ್ಷತೆಯಿಂದ ಜನರ ಒಳಿತಿಗೆ ಶ್ರಮಿಸಿದರು. ಆದರೆ ಅವರನ್ನು ನಾವು ಬಲುಬೇಗ ಕಳೆದುಕೊಳ್ಳಬೇಕಾಯಿತು. ರವಿ ಅವರಂತೆ ರೋಹನ್ ಕೂಡ  ದಕ್ಷ ಐಎಎಸ್ ಅಧಿಕಾರಿಯಾಗಬೇಕು ಎಂಬುದು ನಮ್ಮಹಂಬಲವಾಗಿದ್ದು, ಆತನನ್ನು ಆ ದಿಶೆಯಲ್ಲಿ ಬೆಳೆಸಲು ತಮ್ಮ ಮಠ ಸದಾ ತತ್ಪರವಾಗಿರಲಿದೆ ಎಂದು ನಿರ್ಮಲಾನಂದ ಶ್ರೀಗಳು ಭರವಸೆ ನೀಡಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments