Select Your Language

Notifications

webdunia
webdunia
webdunia
webdunia

ನಟ ವಿನೋದ್ ಆಳ್ವಾಗೆ ಜಾಮೀನು ಮಂಜೂರು

ನಟ ವಿನೋದ್ ಆಳ್ವಾಗೆ ಜಾಮೀನು ಮಂಜೂರು
ಪುತ್ತೂರು , ಮಂಗಳವಾರ, 1 ಡಿಸೆಂಬರ್ 2015 (16:33 IST)
ಚಿತ್ರನಟ ವಿನೋದ್ ಆಳ್ವಾಗೆ ಜಾಮೀನು ಮಂಜೂರು ಮಾಡಲಾಗಿದೆ. ಪುತ್ತೂರಿನ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ. 
ವಿನೋದ್ ಆಳ್ವ ಅವರ ಮ್ಯಾನೇಜರ್ ಸಚ್ಚಿದಾನಂದ ಅವರು ತಮಗೆ ಆಳ್ವ ವಿರುದ್ಧ ಜೀವಬೆದರಿಕೆ ಮತ್ತು ಕೊಲೆ ಯತ್ನದ ಆರೋಪ ಮಾಡಿದ ಬಳಿಕ ಅವರನ್ನು ಬಂಧಿಸಲಾಗಿತ್ತು.  ಕಳೆದ 14ದಿನಗಳಿಂದ ಜೈಲಿನಲ್ಲಿದ್ದ ವಿನೋದ್ ಆಳ್ವ ಅವರಿಗೆ ಜಾಮೀನು ಸಿಕ್ಕಿದೆ.

 ಬಹುಭಾಷಾ ನಟನಾಗಿದ್ದ ವಿನೋದ್ ಆಳ್ವ ಮತ್ತು ಸಚ್ಚಿದಾನಂದ ಅವರ ನಡುವೆ ಜಮೀನು ಮತ್ತು ದೇವಸ್ಥಾನದ ನಿರ್ವಹಣೆ ಕುರಿತಂತೆ ಆಗಾಗ್ಗೆ ಗಲಾಟೆಯಾಗುತ್ತಿತ್ತು.  ನವೆಂಬರ್ 16ರಂದು ಅವರನ್ನು ಈಶ್ವರಮಂಗಲದ ನಿವಾಸದಿಂದ ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

 ಸಚ್ಚಿದಾನಂದ ಅವರಿಗೆ ನೀಡಿದ್ದ ಪವರ್ ಅಟಾರ್ನಿ ವಾಪಸ್ ಪಡೆದಿದ್ದರಿಂದ ಅವರು ತಮ್ಮ ಮೇಲೆ ಸುಳ್ಳು ದೂರು ನೀಡಿದ್ದಾರೆಂದು ವಿನೋದ್ ಆಳ್ವ ಆರೋಪಿಸಿದ್ದಾರೆ. 

Share this Story:

Follow Webdunia kannada