Select Your Language

Notifications

webdunia
webdunia
webdunia
webdunia

ರಾಷ್ಟ್ರಕವಿ ಕುವೆಂಪು ಮನೆಯಲ್ಲಿ ಕಳ್ಳತನ ಮಾಡಿದ ಆರೋಪಿಯ ಬಂಧನ

ರಾಷ್ಟ್ರಕವಿ ಕುವೆಂಪು ಮನೆಯಲ್ಲಿ ಕಳ್ಳತನ ಮಾಡಿದ ಆರೋಪಿಯ ಬಂಧನ
ಶಿವಮೊಗ್ಗ , ಶುಕ್ರವಾರ, 27 ನವೆಂಬರ್ 2015 (12:24 IST)
ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿಯ ಮನೆಯಲ್ಲಿ ಕಳ್ಳತನ ಮಾಡಿದ್ದಕ್ಕೆ ಸಂಬಂಧಿಸಿದಂತೆ ಆರೋಪಿ ರೇವಣ್ಣ ಎಂಬವನನ್ನು ಪೊಲೀಸರು ಬಂಧಿಸಿದ್ದು, ತಾನೇ ಕಳ್ಳತನ ಮಾಡಿದ್ದು ಎಂದು ಒಪ್ಪಿಕೊಂಡಿದ್ದಾನೆ. ಹಲವು ಕಳ್ಳತನದಲ್ಲಿ ಭಾಗಿಯಾಗಿದ್ದ ರೇವಣ್ಣನನ್ನು ಬಂಧಿಸಲಾಯಿತು. ಒಂದು ಕ್ಯಾಮೆರಾ ಒಡೆದುಹಾಕಿದ್ದರೂ ಮತ್ತೊಂದು ಕ್ಯಾಮೆರಾದಲ್ಲಿ ಅವನ ಮುಖಚಹರೆ ಸ್ಪಷ್ಟವಾಗಿತ್ತು.

ಇದರ ಆಧಾರದ ಮೇಲೆ ರೇವಣ್ಣನನ್ನು ಬಂಧಿಸಿದರು.ಶಿವಮೊಗ್ಗ ಪೊಲೀಸರು ನಿನ್ನೆ ದಾವಣಗೆರೆಯ ಆನಗೋಡು ನಿವಾಸಿ ರೇವಣ್ಣನನ್ನು ಶಂಕೆಯ ಮೇಲೆ ವಶಕ್ಕೆ ತೆಗೆದುಕೊಂಡು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದಾಗ ತಾನೇ ಕಳ್ಳನತ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

  ರೇವಣ್ಣಗೆ ಸಹಾಯ ಮಾಡಿದ ಆಂಜನಪ್ಪ, ಪ್ರಕಾಶ್ ಎಂಬ ಮತ್ತಿಬ್ಬರನ್ನು ಕೂಡ ಬಂಧಿಸಿದ್ದಾರೆ. ಪದ್ಮಪ್ರಶಸ್ತಿ ಸೇರಿದಂತೆ ಮೈಸೂರು ವಿವಿಯ ಪ್ರಶಸ್ತಿಗಳನ್ನು ಕದ್ದು ಪರಾರಿಯಾಗಿದ್ದ. ನವೆಂಬರ್ 23ರ ರಾತ್ರಿ ಈ ಕಳ್ಳತನ ನಡೆದಿತ್ತು. 

Share this Story:

Follow Webdunia kannada