Select Your Language

Notifications

webdunia
webdunia
webdunia
webdunia

ಮಹಿಳೆಗೆ ಹಾಡಗಲೇ ಬೆಂಕಿ ಹಚ್ಚಿ ಹತ್ಯೆಗೈದ ದುಷ್ಕರ್ಮಿಗಳು

ಮಹಿಳೆಗೆ ಹಾಡಗಲೇ ಬೆಂಕಿ ಹಚ್ಚಿ ಹತ್ಯೆಗೈದ ದುಷ್ಕರ್ಮಿಗಳು
ಬೆಳಗಾವಿ , ಬುಧವಾರ, 25 ಫೆಬ್ರವರಿ 2015 (16:31 IST)
ಮಹಿಳೆಯೋರ್ವಳ ಮೇಲೆ ನೂರಾರು ಜನರ ಎದುರೇ ಸೀಮೆಎಣ್ಣೆ ಸುರಿದ ದುಷ್ಕರ್ಮಿಗಳು, ಆಕೆಗೆ ಬೆಂಕಿ ಹಚ್ಚುವ ಮೂಲಕ ಹಾಡಗಲೇ ದಾರುಣವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ನಗರ ಪ್ರದೇಶದಲ್ಲಿ ನಡೆದಿದೆ.  
 
ಸಾವಿರಾರು ಮಂದಿ ಜನರು ನೆರೆದಿದ್ದರೂ ಕೂಡ ಹಠಾತ್ತಾಗಿ ಆಗಮಿಸಿದ ದುಷ್ಕರ್ಮಿಗಳ ಗುಂಪೊಂದು ನಿಂತಿದ್ದ ಮಹಿಳೆಯ ಮೇಲೆ ಏಕಾಏಕಿ ಎರಗಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದೆ. ಈ ಮೂಲಕ ಮಹಿಳೆಯನ್ನು ಹತ್ಯೆಗೈಯ್ಯಲಾಗಿದ್ದು, ಘಟನೆಯು ಇಂದು ಮಧ್ಯಾಹ್ನ ಸರಿ ಸುಮಾರು 12.30ರ ವೇಳೆಯಲ್ಲಿ ನಡೆದಿದೆ ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ. ದುಷ್ಕರ್ಮಿ ಹಾಗೂ ಮಹಿಳೆಯ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. 
 
ಇನ್ನು ಸ್ಥಳಕ್ಕೆ ನಿಪ್ಪಾಣಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇನ್ನು ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಪೊಲೀಸರು, ಹಿಂದಿನ ದ್ವೇಷ ಹಿನ್ನೆಲೆಯಲ್ಲಿ ಮಹಿಳೆಯನ್ನು ಹತ್ಯೆಗೈಯ್ಯಲಾಗಿದೆ ಎಂಬುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ.  

Share this Story:

Follow Webdunia kannada