ಬೆಂಗಳೂರು: ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಬಂಧಿತರಾಗಿದ್ದ ಪಾಕಿಸ್ತಾನ ಮೂವರು ನಾಗರಿಕರಿಂದ ಬೆಚ್ಚಿ ಬೀಳಿಸುವ ಮಾಹಿತಿ ಹೊರ ಬಿದ್ದಿದೆ. ಅವರು ಭಾರತದ ಗುರುತಿನ ಚೀಟಿಯಾದ ಆಧಾರ್ ಕಾರ್ಡ್ ಪಡೆಯಲು ಕೇವಲ 100 ರೂ. ವೆಚ್ಚ ಮಾಡಿದ್ದರಂತೆ!
ಬನಶಂಕರಿಯ ಮಧ್ಯವರ್ತಿಯೊಬ್ಬ ಈ ಮೂವರಿಗೆ ತಲಾ 100 ರೂ. ನಂತೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟಿದ್ದ ಎಂಬುದು ವಿಚಾರಣೆ ವೇಳೆ ಬಹಿರಂಗವಾಗಿದೆ. ಇದೀಗ ಆತನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಮೊನ್ನೆಯಷ್ಟೇ ಕುಮಾರಸ್ವಾಮಿ ಲೇ ಔಟ್ ಪೊಲೀಸರು ಮತ್ತು ಸಿಐಡಿ ಪೊಲೀಸರು ಜಂಟಿಯಾಗಿ ಕಾರ್ಯಾಚಾರಣೆ ನಡೆಸಿ ಓರ್ವ ಮಹಿಳೆ ಮತ್ತು ಇಬ್ಬರು ಪುರುಷರನ್ನು ಬಂಧಿಸಿದ್ದರು. ಇವರಿಂದ ಹೆಚ್ಚಿನ ಮಾಹಿತಿ ಏನೂ ಹೊರ ಬೀಳದಿದ್ದರೂ, ಸ್ಥಳೀಯರು ನಡೆಸುತ್ತಿರುವ ಆಧಾರ್ ದಂಧೆ ಬೆಳಕಿಗೆ ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ