Webdunia - Bharat's app for daily news and videos

Install App

ವಿಶಿಷ್ಟ ಜಾತ್ರೆ: ದೇವರಿಗೆ ಸಿಗರೇಟ್ ಆರತಿ, ಮದ್ಯದಭಿಷೇಕ

Webdunia
ಸೋಮವಾರ, 6 ಮಾರ್ಚ್ 2017 (08:44 IST)
ದೇವರಿಗೆ ಹೂವು, ಹಣ್ಣು, ತೆಂಗಿನಕಾಯಿ ಅರ್ಪಿಸಿ ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ದೇವರಿಗೆ ಮದ್ಯ, ಸಿಗರೇಟ್ ಅರ್ಪಿಸುವುದನ್ನು ನೋಡಿರುತ್ತೀರಾ? ಹೌದು ಇದು ಸತ್ಯ. ಇಂತಹ ವಿಶಿಷ್ಟ ಜಾತ್ರೆಯೊಂದು ಉತ್ತರ ಕನ್ನಡದ ಕಾರವಾರದ ಕೋಡಿಬಾಗ್‌ನಲ್ಲಿ ನಡೆಯುತ್ತದೆ. ಅಲ್ಲಿನ ಆರಾಧ್ಯ ದೈವ 'ಖಾಪ್ರಿ'ಗೆ ಸಿಗರೇಟ್ ಆರತಿ ಬೆಳಗಿ, ಮದ್ಯದಭಿಷೇಕ ಮಾಡಿ ಕೋಳಿ ಮಾಂಸವನ್ನು ಅರ್ಪಿಸುತ್ತಾರೆ.
ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ನಡೆಯುವ ಈ ಜಾತ್ರೆ ಈ ಬಾರಿ ಮಾರ್ಚ್ 5 ರಂದು ವೈಭವೋಪೇತವಾಗಿ ನಡೆಯಿತು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಕ್ತಿದೇವತೆ ಎಂದು ಪ್ರಸಿದ್ಧನಾಗಿರುವ ಖಾಪ್ರಿ ದೇವರಿಗೆ ಹರಕೆ ಒಪ್ಪಿಸಿದರೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ಸ್ಥಳೀಯರು, ಪಕ್ಕದ ಗೋವಾ, ಮಹಾರಾಷ್ಟ್ರದ ಜನರು ಬಂದು ನಿನ್ನೆ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಕೇವಲ ಹಿಂದೂಗಳಷ್ಟೇ ಅಲ್ಲ ಅನ್ಯ ಧರ್ಮೀಯರು ಸಹ ಖಾಪ್ರಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಕ್ರಿಶ್ಚಿಯನ್ನರು ಮೇಣದಬತ್ತಿ ಹತ್ತಿ ಖಾಪ್ರಿ ದೇವರನ್ನು ಆರಾಧಿಸುತ್ತಾರೆ.
 
ಪೌರಾಣಿಕ ಹಿನ್ನೆಲೆ: ಮೂಲತಃ ದಕ್ಷಿಣ ಆಫ್ರಿಕಾದ ವ್ಯಕ್ತಿಯೋರ್ವ ಖಾಪ್ರಿ ದೇವರನ್ನು ಕೋಡಿಬಾಗದಲ್ಲಿ ತಂದು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದ. ಕೆಲ ಕಾಲದ ನಂತರ ಆತ ಇದಕ್ಕಿದ್ದಂತೆ ಕಾಣೆಯಾದ. ಆತ ಎಲ್ಲಿಗೆ ಹೋದ, ಏಕೆ ಹೋದ ಎಂದು ಯಾರಿಗೂ ತಿಳಿಯಲಿಲ್ಲ.
 
ಕೆಲ ದಿನದ ನಂತರ ಪರೆಸಪ್ಪ ಮನೆತನದವರಿಗೊಂದು (ದೇವಸ್ಥಾನದ ಅರ್ಚಕರು) . ಅದರಲ್ಲಿ ದೇವರ ಮೂರ್ತಿಯೊಂದು ಕಾಣಿಸಿಕೊಂಡು ನನಗೆ ಗುಡಿ ಕಟ್ಟಿ ಪೂಜೆ ಸಲ್ಲಿಸಿ. ಸಿಗರೇಟ್, ಮದ್ಯ, ಕೋಳಿ ಮಾಂಸ ಅರ್ಪಿಸಿ. ನಾನು ಭಕ್ತರ ಇಷ್ಟಾರ್ಥ ಪೂರೈಸುತ್ತೇನೆ ಎಂದು ಹೇಳಿದಂತಾಯಿತು.
 
ರಾತ್ರಿ ಕಂಡ ಕನಸಿನಂತೆ ಪರೆಸಪ್ಪ ಮನೆತನದ ಆ ವ್ಯಕ್ತಿಗೆ ಕಾಳಿ ನದಿ ತೀರದಲ್ಲಿ ಕಲ್ಲಿನ ಮೂರ್ತಿಯೊಂದು ದೊರಕಿತು. ಆ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ವರ್ಷಕ್ಕೊಮ್ಮೆ ಖಾಪ್ರಿ ದೇವರ ಜಾತ್ರೆ ನಡೆಯುತ್ತದೆ. ಖಾಪ್ರಿ ಅವರಿಗೆ ಸಿಗರೇಟ್, ಸಾರಾಯಿ ಹಾಗೂ ಕೋಳಿ ಮಾಂಸ ಇಷ್ಟವಾಗಿತ್ತು. ಆ ಕಾರಣದಿಂದ ಭಕ್ತರು ಈ ಎಲ್ಲ ವಸ್ತುಗಳಿಂದ ಹರಕೆ ತೀರಿಸುತ್ತಾರೆ. ಕೆಲವರು ದೇವಾಲಯದ ಹೊರಗೆ ಮೇಣದ ಬತ್ತಿಯನ್ನು ಬೆಳಗಿಸುತ್ತಾರೆ. ಪ್ರತಿ ಬುಧವಾರ ಹಾಗೂ ಭಾನುವಾರ ಖಾಪ್ರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ ಜಯದೇವ್‌ಗೆ ರೋಗಿಗಳ ಸಂಖ್ಯೆ ಹೆಚ್ಚಳ: ಹೆಚ್ಚುವರಿ ತಜ್ಞ ವೈದ್ಯರ ನಿಯೋಜನೆ

ವೈಜ್ಞಾನಿಕ ಸಾಧನೆಯನ್ನು ಅಪಮಾನಿಸುವ ಮುಖ್ಯಮಂತ್ರಿ ಕ್ಷಮೆ ಕೇಳಲಿ: ಪ್ರಲ್ಹಾದ್ ಜೋಶಿ

ಪ್ರವೀಣ್ ನೆಟ್ಟಾರು ಪ್ರಕರಣ: ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ

ಹಿಮಾಚಲ ಪ್ರದೇಶದಲ್ಲಿ ವರುಣನ ಅಬ್ಬರಕ್ಕೆ 37 ಸಾವು, 400ಕೋಟಿ ನಷ್ಟ

ವಿಮಾನದಲ್ಲಿ ಸಹಪ್ರಯಾಣಿಕನ ಮೂತಿಗೆ ಗುದ್ದಿದ ವ್ಯಕ್ತಿ: ಭಾರತ ಮೂಲದ ಪ್ರಯಾಣಿಕ ಅರೆಸ್ಟ್‌

ಮುಂದಿನ ಸುದ್ದಿ
Show comments