Select Your Language

Notifications

webdunia
webdunia
webdunia
webdunia

ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ ಹಣ ಲೂಟಿ

ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ ಹಣ ಲೂಟಿ
ಬೆಂಗಳೂರು , ಶನಿವಾರ, 1 ಆಗಸ್ಟ್ 2015 (15:31 IST)
ದುಷ್ಕರ್ಮಿಯೋರ್ವ ಕಾರು ಚಾಲಕನ ಗಮನವನ್ನು ಬೇರೆಡೆ ಸೆಳೆದು ಕಾರಿನಲ್ಲಿದ್ದ ಮೂರು ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಗರದ ಹೆಚ್ಎಎಲ್ ಬಳಿ ನಡೆದಿದೆ. 
 
ಕಾರು ಚಾಲಕ ರೋಹಿತ್(30) ಎಂಬಾತನೇ ಹಣ ಕಳೆದುಕೊಂಡ ದುರ್ಧೈವಿಯಾಗಿದ್ದು, ಈತ ನಗರದ ಯಲಹಂಕ ಮೂಲದ ನಿವಾಸಿ ಎಂದು ತಿಳಿದು ಬಂದಿದೆ.
 
ಪ್ರಕರಣದ ವಿವರ:
ನಗರದ ವೈಟ್‌ಫೀಟ್ಡ್‌ನಲ್ಲಿರುವ ಹೆಚ್‌‌ಡಿಎಫ್‌ಸಿ ಬ್ಯಾಂಕ್‌ನಿಂದ ಮೂರು ಲಕ್ಷ ರೂ ಹಣವನ್ನು ಡ್ರಾ ಮಾಡಿಕೊಂಡು ತಮ್ಮ ಮನೆಗೆ ವಾಪಾಸಾಗುತ್ತಿದ್ದರು. ಈ ನಡುವೆ ನಗರದ ಹೆಚ್ಎಎಲ್ ಬಳಿ ಬರುತ್ತಿದ್ದಂತೆ ಕಾರು ಪಂಕ್ಚರ್ ಆಯಿತು. ಪರಿಣಾಮ ಚಾಲಕ ರೋಹಿತ್ ಕಾರಿನಿಂದ ಇಳಿದು ನಿಂತಿದ್ದ. ಈ ವೇಳೆ ಪ್ರವೇಶಿಸಿದ ಅಪರಿಚಿತ ವ್ಯಕ್ತಿ ತಮ್ಮ ಹಣ ಕೆಳೆಗೆ ಬಿದ್ದಿದೆ ನೋಡಿ ಸರ್ ಎಂದು ಚಾಲಕನ ಗಮನ ಬೇರೆಡೆಗೆ ಸೆಳೆದು, ಕಾರಿನಲ್ಲಿದ್ದ ಮೂರು ಲಕ್ಷ ರೂ ಹಣವನ್ನು ದೋಚಿ ಪರಾರಿಯಾಗಿದ್ದಾನೆ. 
 
ಈ ಸಂಬಂಧ ನಗರದ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Share this Story:

Follow Webdunia kannada