ಬೆಂಗಳೂರು ಹಾಗೂ ರಾಮನಗರಗಳಲ್ಲಿ ಕೆಲವು ಕೃತ್ಯಗಳನ್ನು ನಡೆಸುತ್ತಾ ಕುಖ್ಯಾತ ರೌಡಿ ಎನಿಸಿರುವ ನದೀಮ್ ಅವರ ಸಹೋದರ ನವಾಜ್ನನ್ನು ದುಷ್ಕರ್ಮಿಗಳ ಗುಂಪೊಂದು ಹಾಡುಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಇಂದು ಮಾಗಡಿ ತಾಲೂಕು ತಿಪ್ಪಸಂದ್ರದ ಕಾಮತ್ ಹೋಟೆಲ್ನಲ್ಲಿ ನಡೆದಿದೆ.
ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ ನಾಲ್ವರು ದುಷ್ಕರ್ಮಿಗಳನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಧರೆ ಬಂಧಿತ ಆರೋಪಿಗಳ ಮಾಹಿತಿ ತಿಳಿದು ಬಂದಿಲ್ಲ.
ಇನ್ನು ಘಟನಾ ಸ್ಥಳಕ್ಕೆ ಪಿಎಸ್ಐ ಮುರಳೀಧರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮಾಗಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕಱಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.