Select Your Language

Notifications

webdunia
webdunia
webdunia
webdunia

ಕಟ್ಟಡ ನಿರ್ಮಾಣಕ್ಕಾಗಿ ಮರಗಳ ಮಾರಣಹೋಮ

ಕಟ್ಟಡ ನಿರ್ಮಾಣಕ್ಕಾಗಿ ಮರಗಳ ಮಾರಣಹೋಮ
, ಬುಧವಾರ, 23 ಏಪ್ರಿಲ್ 2014 (15:24 IST)
ಬೆಂಗಳೂರು: ಕಟ್ಟಡ ನಿರ್ಮಾಣಕ್ಕಾಗಿ ಮರಗಳ ಮಾರಣಹೋಮ ನಡೆಸಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಬೆಂಗಳೂರಿನ ಓಕಳಿಪುರಂನಲ್ಲಿರುವ ರೇಷ್ಮೆ ಭವನ ಆವರಣದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಸುಮಾರು 60ಕ್ಕೂ ಹೆಚ್ಚು  ಮರಗಳ ಮಾರಣಹೋಮ ನಡೆಸಲಾಗಿದೆ.

ಅರಣ್ಯಇಲಾಖೆಯಿಂದ ಕೇವಲ 26 ಮರಗಳನ್ನು ಕಡಿಯುವುದಕ್ಕೆ ಮಾತ್ರ ಅನುಮತಿ ಪಡೆದು 60ಕ್ಕೂ ಹೆಚ್ಚು ಮರಗಳನ್ನು ಕಡಿದು ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮರಗಳ ಸಂರಕ್ಷಣೆ ಮೂಲಕ ವಾತಾವರಣದ ಸಮತೋಲನ ಕಾಯ್ದುಕೊಳ್ಳಬೇಕಾದ ಸಂದರ್ಭದಲ್ಲಿ ಬೆಳೆದುನಿಂತ ಮರಗಳನ್ನು ಕಡಿಯುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಉದ್ಭವವಾಗಿದೆ. 

Share this Story:

Follow Webdunia kannada