ಶೇರ್ನಲ್ಲಿ ಬಂಡವಾಳ ಹೂಡುವುದಾಗಿ 34 ಕೋಟಿ ರೂ. ಹಣವನ್ನು ವಂಚಿಸಿದ್ದಕ್ಕೆ ಸಂಬಂಧಿಸಿದಂತೆ ಬಿಟಿಎಂ ಲೇಔಟ್ ಹೆಚ್ಡಿಎಫ್ಸಿ ವಿಮಾ ಕಂಪನಿಯ ವ್ಯವಸ್ಥಾಪಕಿ ವಿಶಾಲಾಕ್ಷಿ ಭಟ್ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಡಿವಾಳ ಪೊಲೀಸ್ ಠಾಣೆಗೆ ಈ ಕುರಿತು ಉದ್ಯಮಿಗಳು ದೂರು ನೀಡಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಮಂದಿ ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದ್ದರು.
ವಿಶಾಲಾಕ್ಷಿ ಭಟ್ ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದಾರೆ. ಶ್ರೀನಿವಾಸ್ ಎಂಬುವವರಿಂದ ಹತ್ತು ಲಕ್ಷ ಹಣ ಪಡೆದು ಪಾಲಿಸಿ ಮಾಡಿಸಿಕೊಡುವುದಾಗಿ ಹೇಳಿ ಪಾಲಿಸಿ ಕೊಡದೇ, ಹಣವೂ ವಾಪಸ್ ನೀಡದೇ ನಾಪತ್ತೆಯಾಗಿದ್ದಾರೆ.
ಹಣ ಕಳೆದುಕೊಂಡ ಶ್ರೀನಿವಾಸ್ ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೇ ವಿಶಾಲಾಕ್ಷಿ ಅಪರ್ಣ ಹಂಸ ಎಂಬುವವರಿಗೆ ಕೂಡಾ 36 ಲಕ್ಷ ವಂಚನೆ ಮಾದ್ದಾರೆಂದು ಮತ್ತೊಂದು ದೂರು ನೀಡಲಾಗಿದೆ.