Select Your Language

Notifications

webdunia
webdunia
webdunia
webdunia

ಶೇರ್‌ನಲ್ಲಿ ಬಂಡವಾಳ ಆಮಿಷ: 34 ಕೋಟಿ ರೂ. ವಂಚಿಸಿ ಮ್ಯಾನೇಜರ್ ಪರಾರಿ

ಶೇರ್‌ನಲ್ಲಿ ಬಂಡವಾಳ ಆಮಿಷ: 34 ಕೋಟಿ ರೂ. ವಂಚಿಸಿ ಮ್ಯಾನೇಜರ್ ಪರಾರಿ
ಬೆಂಗಳೂರು , ಗುರುವಾರ, 26 ನವೆಂಬರ್ 2015 (12:00 IST)
ಶೇರ್‌ನಲ್ಲಿ ಬಂಡವಾಳ ಹೂಡುವುದಾಗಿ 34 ಕೋಟಿ ರೂ. ಹಣವನ್ನು ವಂಚಿಸಿದ್ದಕ್ಕೆ ಸಂಬಂಧಿಸಿದಂತೆ ಬಿಟಿಎಂ ಲೇಔಟ್ ಹೆಚ್‌ಡಿಎಫ್‌ಸಿ ವಿಮಾ ಕಂಪನಿಯ ವ್ಯವಸ್ಥಾಪಕಿ ವಿಶಾಲಾಕ್ಷಿ ಭಟ್ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.  ಮಡಿವಾಳ ಪೊಲೀಸ್ ಠಾಣೆಗೆ ಈ ಕುರಿತು ಉದ್ಯಮಿಗಳು ದೂರು ನೀಡಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಮಂದಿ ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದ್ದರು.
 
ವಿಶಾಲಾಕ್ಷಿ ಭಟ್​ ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದಾರೆ. ಶ್ರೀನಿವಾಸ್ ಎಂಬುವವರಿಂದ ಹತ್ತು ಲಕ್ಷ ಹಣ ಪಡೆದು ಪಾಲಿಸಿ ಮಾಡಿಸಿಕೊಡುವುದಾಗಿ ಹೇಳಿ ಪಾಲಿಸಿ ಕೊಡದೇ, ಹಣವೂ ವಾಪಸ್​ ನೀಡದೇ ನಾಪತ್ತೆಯಾಗಿದ್ದಾರೆ. 
 
ಹಣ ಕಳೆದುಕೊಂಡ ಶ್ರೀನಿವಾಸ್ ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೇ ವಿಶಾಲಾಕ್ಷಿ  ಅಪರ್ಣ ಹಂಸ ಎಂಬುವವರಿಗೆ ಕೂಡಾ 36 ಲಕ್ಷ ವಂಚನೆ ಮಾದ್ದಾರೆಂದು ಮತ್ತೊಂದು ದೂರು ನೀಡಲಾಗಿದೆ. 

Share this Story:

Follow Webdunia kannada