Select Your Language

Notifications

webdunia
webdunia
webdunia
webdunia

ಈಜಲು ತೆರಳಿದ್ದ ಮೂವರು ಸ್ನೇಹಿತರು ನೀರು ಪಾಲು

ಈಜಲು ತೆರಳಿದ್ದ ಮೂವರು ಸ್ನೇಹಿತರು ನೀರು ಪಾಲು
ಗುಬ್ಬಿ , ಶುಕ್ರವಾರ, 12 ಫೆಬ್ರವರಿ 2016 (16:12 IST)
ಈಜಲೆಂದು ಕೆರೆಗೆ ತೆರಳಿದ್ದ ಮೂವರು ಬಾಲಕರು ನೀರುಪಾಲಾದ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಉರುಳುಗೆರೆ ಗ್ರಾಮದಲ್ಲಿ ನಡೆದಿದೆ. 
 
ಮೃತರನ್ನು ವೇಣು(13) ಶಶಿಧರ್ (13) ಚೇತನ (13) ಎಂದು ಗುರುತಿಸಲಾಗಿದ್ದು,  ಪೂರ್ವ ಸಿದ್ಧತಾ ಪರೀಕ್ಷೆ ಹಾಗೂ ಚುನಾವಣೆ ಅಂಗವಾಗಿ ಶಾಲೆಗೆ ರಜೆ  ಇದ್ದುದರಿಂದ ಸ್ನೇಹಿತರು ಕೆರೆಗೆ ಈಜಲು ತೆರಳಿದ್ದರು. ಆದರೆ ದುರದೃಷ್ಟವಶಾತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
 
ಸಿ.ಎಸ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವಗಳನ್ನು ಮೇಲೆತ್ತಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
 
ಮಕ್ಕಳನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. 
 

Share this Story:

Follow Webdunia kannada