Select Your Language

Notifications

webdunia
webdunia
webdunia
webdunia

ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರ ಆತ್ಮಹತ್ಯೆ
ಬಿಜಾಪುರ , ಶುಕ್ರವಾರ, 24 ಅಕ್ಟೋಬರ್ 2014 (15:00 IST)
ಸಾಲ ಬಾಧೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸಂಭವಿಸಿದೆ. ಬಿಜಾಪುರ ಜಿಲ್ಲೆ ಬಸನವಬಾಗೇವಾಡಿಯ ಗುಡದಿಮ್ಮಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಮಿಡಗುಂದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮನೆಯಲ್ಲಿ ವಿಷ ಸೇವಿಸಿ ರೇಣುಕಪ್ಪ ಸುಣಗಾರ(75), ಯಲ್ಲವ್ವ ಸುಣಗಾರ(55) ಮತ್ತು ಗಂಗಾಬಾಯಿ ಆತ್ಮಹತ್ಯೆ ಮಾಡಿಕೊಂಡವರು. ಬೆಳೆ ಸಾಲ ತೀರಿಸಲಾಗದೇ ಕಂಗಾಲಾಗಿದ್ದ ಕುಟುಂಬ ಸಾಲಗಾರರ ಪೀಡಿಸುತ್ತಿದ್ದರಿಂದ ಬೇಸತ್ತಿದ್ದರು.

ಇದಕ್ಕೆ ಆತ್ಮಹತ್ಯೆಯೊಂದೇ ಪರಿಹಾರ ಎಂದು ಭಾವಿಸಿ ಮೂವರೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದರು. 

Share this Story:

Follow Webdunia kannada