Select Your Language

Notifications

webdunia
webdunia
webdunia
webdunia

ಮೂರು ಮನೆಗಳಿಗೆ ಬೆಂಕಿ: ಓರ್ವ ಸಜೀವ ದಹನ

ಮೂರು ಮನೆಗಳಿಗೆ ಬೆಂಕಿ: ಓರ್ವ ಸಜೀವ ದಹನ
ಹಾವೇರಿ , ಶನಿವಾರ, 30 ಜನವರಿ 2016 (10:25 IST)
ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಮೂರು ಮನೆಗಳು ಹಾಗೂ ಎರಡು ಮೇವಿನ ಬಣವೆಗಳು ಸುಟ್ಟು ಕರಕಲಾಗಿದ್ದೆ ಅಲ್ಲದೆ, ಓರ್ವ ವ್ಯಕ್ತಿ ಸಜೀವ ದಹನಗೊಂಡ ಘಟನೆ ರಾಣೆಬೆನ್ನೂರು ತಾಲೂಕಿನ ಮೈದೂರು ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
 
ಮೃತನನ್ನು 40 ವರ್ಷದ ದ್ಯಾಮಪ್ಪ ಹರಿಜನ (40 ) ಎಂದು ಗುರುತಿಸಲಾಗಿದ್ದು ಘಟನೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ.
 
ಮೂರು ಮನೆಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
 
ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ
 
ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada