Webdunia - Bharat's app for daily news and videos

Install App

ಹಣದಾಸೆಗಾಗಿ ಎರಡನೇ ಮದುವೆ, ಪತ್ನಿಗೆ ಪಿಎಸ್‌ಐ ಕಿರುಕುಳ

Webdunia
ಸೋಮವಾರ, 1 ಫೆಬ್ರವರಿ 2016 (16:38 IST)
ಸಿರುಗುಪ್ಪ ಪಟ್ಟಣ ಠಾಣೆ ಪಿಎಸ್‌ಐ ರಘುವಿನ ಕಿರುಕುಳ ಸಹಿಸದೇ ಅವರ ಪತ್ನಿ ಚಂದ್ರಕಲಾ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಂಭವಿಸಿದೆ. ಮೊದಲನೇ ವಿವಾಹವಾಗಿ ಪತ್ನಿಯನ್ನು ತ್ಯಜಿಸಿದ್ದ ರಘು ಅದನ್ನು ಮುಚ್ಚಿಟ್ಟು  ಚಂದ್ರಕಲಾರನ್ನು ಎರಡನೇ ಮದುವೆಯಾಗಿದ್ದಾರೆಂದು ಚಂದ್ರಕಲಾ ಆರೋಪಿಸಿದ್ದಾರೆ. 

ರಘು ಚಂದ್ರಕಲಾಗೆ ನಿರಂತರ ಕಿರುಕುಳ ನೀಡುತ್ತಿದ್ದರು. ರಘುವಿನ ನಿರಂತರ ಕಿರುಕುಳದಿಂದ ಬೇಸತ್ತ ಚಂದ್ರಕಲಾ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ರಘು ತನ್ನ  ಮಗುವನ್ನೂ ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದು ಚಂದ್ರಕಲಾ ದೂರಿದ್ದಾರೆ.  ಮದುವೆ ಸಂದರ್ಭದಲ್ಲಿ ಚಂದ್ರಕಲಾ ಮನೆಯವರು ಒಂದೂವರೆ ಎಕರೆ ಭೂಮಿ, 45 ಗ್ರಾಂ. ಚಿನ್ನವನ್ನು ಕೊಟ್ಟು ಮದುವೆ ಮಾಡಿದ್ದರು.

 ಆದರೆ ಮದುವೆಯಾದ ಮೇಲೆ ತನ್ನ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆಂದು ಚಂದ್ರಕಲಾ ಆರೋಪಿಸಿದ್ದಾರೆ. ರಘುವಿನ ಜತೆಗೆ ತಂದೆ, ತಾಯಿ ಕೂಡ ತನಗೆ ಥಳಿಸಿದ್ದಾರೆಂದೂ ಚಂದ್ರಕಲಾ ದೂರಿನಲ್ಲಿ ಹೇಳಿದ್ದಾರೆ. ಇದಲ್ಲದೇ ತಮಗೆ ಜೀವಬೆದರಿಕೆ ಹಾಕಿದ್ದಾರೆಂದೂ ಚಂದ್ರಕಲಾ ತಂದೆ ತಿಳಿಸಿದ್ದಾರೆ. ಈ ಕುರಿತು ಬಳ್ಳಾರಿ ವರಿಷ್ಠಾಧಿಕಾರಿಗೆ ದೂರು ನೀಡಲು ಚಂದ್ರಕಲಾ ತಂದೆ, ತಾಯಿಗಳು ನಿರ್ಧರಿಸಿದ್ದಾರೆ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments