Webdunia - Bharat's app for daily news and videos

Install App

ರೈತನಿಂದ 85 ಸಾವಿರ ಲಪಟಾಯಿಸಿದ ಇಬ್ಬರು ಖದೀಮರು

Webdunia
ಗುರುವಾರ, 18 ಸೆಪ್ಟಂಬರ್ 2014 (11:32 IST)
ತರೀಕೆರೆಯ ಕೆನರಾ ಬ್ಯಾಂಕ್‌ನ ಆವರಣದಲ್ಲಿ ಮಲ್ಲಪ್ಪ ಎಂಬ ಅಮೃತಾಪುರದ ರೈತ  ಬ್ಯಾಂಕಿನಿಂದ 2 ಲಕ್ಷ ರೂ. ಬೆಳೆ ಸಾಲ ಪಡೆದು ಹಣ ಎಣಿಕೆ ಮಾಡುತ್ತಿದ್ದಾಗ ಇಬ್ಬರು ಆಗಂತುಕರು 85 ಸಾವಿರ ರೂ. ಲಪಟಾಯಿಸಿದ ಘಟನೆ ನಡೆದಿದೆ.   ಮಲ್ಲಪ್ಪ ಎಂಬವರು ಬ್ಯಾಂಕ್ ಆವರಣದಲ್ಲಿ ಹಣ ಎಣಿಕೆಮಾಡುವಾಗ ಆಗಂತುಕರೊಬ್ಬರು ಬಂದು ಹಣ ಎಣಿಕೆಗೆ ಸಹಾಯಮಾಡುವುದಾಗಿ ಹೇಳಿ ಅವರು ಕೂಡ ಸ್ವಲ್ಪ ಹಣ ಪಡೆದು ಎಣಿಕೆಮಾಡತೊಡಗಿದರು.

ಅಷ್ಟರಲ್ಲಿ ಇನ್ನೊಬ್ಬ ಆಗಂತುಕ ಮಲ್ಲಪ್ಪ ಅವರ ಗಮನ ಬೇರೆಡೆಗೆ ಸೆಳೆದಾಗ ಒಂದಷ್ಟು ಹಣವನ್ನು ಮೊದಲ ಆಗಂತುಕ ಜೇಬಿಗಿಳಿಸಿದ್ದ. ಹಣ ಲಪಾಟಿಯಿಸುತ್ತಿರುವ ದೃಶ್ಯ ಬ್ಯಾಂಕಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಮಲ್ಲಪ್ಪ  ಮನೆಗೆ ಹೋಗಿ ಹಣವನ್ನು ಎಣಿಕೆ ಮಾಡಿದಾಗ 85 ಸಾವಿರ ರೂ. ಕಡಿಮೆಯಿರುವ ಸಂಗತಿ ಬೆಳಕಿಗೆ ಬಂದಿದೆ. ಕೂಡಲೇ ಬ್ಯಾಂಕಿಗೆ ವಿಷಯ ತಿಳಿಸಿದಾಗ ಸಿಸಿಟಿವಿ ಕ್ಯಾಮೆರಾದಲ್ಲಿ ಪರೀಕ್ಷೆ ಮಾಡಿದಾಗ ಹಣ ಲಪಟಾಯಿಸಿದ ವಿಷಯ ಗೊತ್ತಾಗಿ ಮಲ್ಲಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments