Webdunia - Bharat's app for daily news and videos

Install App

ಬಾಲಮಂದಿರದಿಂದ ಸಿನಿಮೀಯ ಸ್ಟೈಲ್‌ನಲ್ಲಿ ಎಸ್ಕೇಪ್ ಆದ 18 ಬಾಲಕರು

Webdunia
ಭಾನುವಾರ, 14 ಸೆಪ್ಟಂಬರ್ 2014 (15:36 IST)
ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿರುವ ಸರಕಾರಿ ಬಾಲಮಂದಿರದಿಂದ 18 ಬಾಲಕರು ಪರಾರಿಯಾದ ಘಟನೆ ಕಳೆದ ಶನಿವಾರ ಮಧ್ಯರಾತ್ರಿ ನಡೆದಿದೆ. 

ಪರಾರಿಯಾದ ಬಾಲಕರು ನೆರೆಯ ನೇಪಾಳ ದೇಶ ಮತ್ತು ಓರಿಸ್ಸಾ, ರಾಜಸ್ಥಾನ ರಾಜ್ಯಗಳಿಗೆ ಸೇರಿದವರೆಂದು  ಹೇಳಲಾಗುತ್ತಿದ್ದು, ಕಳೆದ ರಾತ್ರಿ ಸುಮಾರು 12. 30ರಿಂದ 1.30 ರೊಳಗೆ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. 
 
ಪೂರ್ವ ಯೋಜನೆ ಮಾಡಿದ ಬಾಲಕರು ಮಧ್ಯರಾತ್ರಿ ಟೆರೆಸ್ ಮೇಲೇರಿ ನೀರಿನ ಟ್ಯಾಂಕ್‌ಗೆ ಅಳವಡಿಸಲಾಗಿದ್ದ ಪೈಪ್ ಮೂಲಕ ಕೆಳಗಿಳಿದು ಹೋಗಿದ್ದಾರೆ ಎಂಬುದಕ್ಕೆ ಕುರುಹುಗಳು ಲಭ್ಯವಾಗಿವೆ. 
 
ಬಾಲಮಂದಿರದಲ್ಲಿ 4 ವರ್ಷದಿಂದ 18 ವರ್ಷದೊಳಗಿನ ಒಟ್ಟು 255 ಹುಡುಗರಿದ್ದು, ಅವರಲ್ಲಿ 18 ಜನ ಪರಾರಿಯಾಗಿದ್ದಾರೆ ಎಂದು ಮಂದಿರದ ಮೇಲ್ವಿಚಾರಕರು ತಿಳಿಸಿದ್ದಾರೆ. ಪರಾರಿಯಾದ ಬಾಲಕರಲ್ಲಿ ಯಾರು ಕೂಡ ಇಲ್ಲಿಯವರೆಗೆ ಪತ್ತೆಯಾಗಿಲ್ಲ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments