ನೂರು ಪ್ರತಿಶತ ಬಯೋ ಡೀಸೆಲ್ ಹೊಂದಿರುವ ದೇಶದ ಮೊದಲ ಬಸ್ ಪ್ರಾಯೋಗಿಕವಾಗಿ ಬೆಂಗಳೂರು-ಚೆನ್ನೈ ಮಾರ್ಗವಾಗಿ ಸಂಚರಿಸಲಿದ್ದು, ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು.
ಬೆಂಗಳೂರು ನಗರದ ಶಾಂತಿನಗರ ಕೆಎಸ್ಆರ್ಟಿಸಿ ಕೇಂದ್ರ ಕಛೇರಿಯಲ್ಲಿ ಬಯೋ ಡೀಸೆಲ್ ಬಸ್ಗಳಿಗೆ ಚಾಲನೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನೂರು ಪ್ರತಿಶತ ಬಯೋ ಡೀಸೆಲ್ ಹೊಂದಿರುವ ಬಸ್ಗಳನ್ನು ಸ್ಕ್ಯಾನಿಯಾ ಸಂಸ್ಥೆ ನೀಡಿದ್ದು, ಬಸ್ಗಳ ಸಾದಕ ಬಾದಕಗಳ ಪರಿಶೀಲನೆಯ ನಂತರ ಮತ್ತಷ್ಟು ಬಸ್ಗಳನ್ನು ಖರೀದಿಸಲಾಗುವುದು ಎಂದು ತಿಳಿಸಿದರು.
ಬಿಎಂಟಿಸಿ, ಕೆಎಸ್ಆರ್ಟಿಸಿ, ವಾಯುವ್ಯ ಸಾರಿಗೆ ಮತ್ತು ಈಶಾನ್ಯ ಸಾರಿಗೆ ನಿಗಮದ 1,800 ಬಸ್ಗಳಿಗೆ 20 ಪ್ರತಿಶತ ಪ್ರಮಾಣದಲ್ಲಿ ಬಯೋ ಡೀಸೆಲ್ ಬಳಸಲಾಗುತ್ತಿದೆ. ರಾಜ್ಯದಲ್ಲಿ ಮಾಲಿನ್ಯ ಕಡಿಮೆ ಮಾಡಲು ಮತ್ತು ಡೀಸೆಲ್ ಉಳಿತಾಯಕ್ಕೆ ಸಹಕಾರಿಯಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ