Select Your Language

Notifications

webdunia
webdunia
webdunia
webdunia

ಮಂಡ್ಯದಲ್ಲಿ ಭಿನ್ನಮತ ಶಮನವಾಗಿದೆ: ಎಸ್.ಎಂ.ಕೃಷ್ಣ

ಮಂಡ್ಯದಲ್ಲಿ ಭಿನ್ನಮತ ಶಮನವಾಗಿದೆ: ಎಸ್.ಎಂ.ಕೃಷ್ಣ
, ಸೋಮವಾರ, 31 ಮಾರ್ಚ್ 2014 (12:15 IST)
PR
PR
ಮಂಡ್ಯ: ಮಂಡ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಮತ್ತೆ ಸ್ಫೋಟಿಸಿದೆ. ಅಂಬರೀಷ್ ಬಣದ ಕೈ ನಾಯಕರಾದ ಅಮರಾವತಿ ಚಂದ್ರಶೇಖರ್ ನೇತೃತ್ವದ ಕಾಂಗ್ರೆಸ್ ಮುಖಂಡರು ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿ ಮಂಡ್ಯದಲ್ಲಿ ಎರಡು ಬಣಗಳ ನಡುವೆ ಭಿನ್ನಮತ ಶಮನ ಕುರಿತು ಮಾತುಕತೆ ನಡೆಸಿದರು. ಲೋಕಸಭೆ ಚುನಾವಣೆಯಲ್ಲಿ ರಮ್ಯಾ ಗೆಲುವಿಗೆ ಸಂಬಂಧಿಸಿದಂತೆ ಗುಂಪುಗಾರಿಕೆ ಉಂಟಾಗದಂತೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಎಸ್.ಎಂ. ಕೃಷ್ಣ ಸಲಹೆ ಮಾಡಿದರು. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಭಿನ್ನಮತ ಶಮನವಾಗಿದೆ ಎಂದು ಎಸ್.ಎಂ. ಕೃಷ್ಣ ಹೇಳಿದ್ದಾರೆ.

ಮಂಡ್ಯದಲ್ಲಿ ಯಾವುದೇ ರಾಜಕೀಯ ಗೊಂದಲವಿಲ್ಲ ಎಂದು ಕೃಷ್ಣ ಹೇಳಿದ್ದಾರೆ. ಏ.2ರಿಂದ ಎಸ್. ಎಂ. ಕೃಷ್ಣ ಅವರು ಚುನಾವಣೆ ಪ್ರಚಾರ ನಡೆಸಲಿದ್ದಾರೆ. ಕಾರ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ಉಂಟಾದ ಭಿನ್ನಮತ ಶಮನವಾಗಿದ್ದು, ಸೋಮಶೇಖರ್ ಅವರ ನೇಮಕಕ್ಕೆ ಅಂಬರೀಷ್ ಬಣ ಒಪ್ಪಿದೆಯೆಂದು ತಿಳಿದುಬಂದಿದೆ.

Share this Story:

Follow Webdunia kannada