ರಾಜ್ಯದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಡೆದ ಕಾಡಾನೆಗಳ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ.
ಹಾಸನದ ಆಲೂರು ತಾಲ್ಲೂಕಿನ ಭರತೂರು ಗ್ರಾಮದ ಕೃಷ್ಣ ಎಂಬುವವರು ಒಂಟಿಸಲಗದ ದಾಳಿಗೆ ಸಾವನ್ನಪ್ಪಿದ್ದು, ಆ ಸಮಯದಲ್ಲಿ ಅವರು ಕಾಫೀ ತೋಟದಲ್ಲಿ ಕೆಲಸ ಮಾಡುತ್ತಿದ್ದರು.
ಕೊಡಗು ಜಿಲ್ಲೆಯ, ವಿರಾಜಪೇಟೆಯ ಕುಟ್ಟ ಎಂಬ ಗ್ರಾಮದಲ್ಲಿ 65 ವರ್ಷದ ಕಾಳ ಎಂಬ ಕಾರ್ಮಿಕ ಕೂಡ ಆನೆ ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ. ತಮ್ಮಯ್ಯ ಕಾಫಿ ಎಸ್ಟೇಟ ನಲ್ಲಿ ಈ ಘಟನೆ ನಡೆದಿದೆ.
ಇತ್ತೀಚಿಗೆ ರಾಜ್ಯದಲ್ಲಿ ಕಾಡುಪ್ರಾಣಿಗಳ ದಾಳಿ ಹೆಚ್ಚುತಲಿದ್ದು, ಕಾಡಂಚಿನಲ್ಲಿರುವವರ ಬದುಕು ದುಸ್ತರವಾಗುತ್ತಿದೆ.