Webdunia - Bharat's app for daily news and videos

Install App

ಹಾದಿ ತಪ್ಪಿದ ಹಾದಿಮನಿ: ಯುವ ಲೇಖಕಿಗೆ ಅಶ್ಲೀಲ ಸಂದೇಶ

Webdunia
ಸೋಮವಾರ, 31 ಮಾರ್ಚ್ 2014 (19:34 IST)
ಬೆಂಗಳೂರು: ವ್ಯಂಗ್ಯಚಿತ್ರಗಳಿಂದ ಜನರ ಮನಸ್ಸನ್ನು ಗೆದ್ದಿದ್ದ ಹಾದಿಮನಿ ಎಂಬ ವ್ಯಂಗ್ಯ ಚಿತ್ರಕಾರ ಯುವ ಲೇಖಕಿಯ ಮನಸ್ಸು ಕದಿಯಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹಾದಿಮನಿ ಹಾದಿತಪ್ಪಿದ ತನ್ನ ಇನ್ನೊಂದು ಮುಖವನ್ನು ಅನಾವರಣ ಮಾಡಿದ್ದಾನೆ. ಹಾದಿಮನಿ ಯುವ ಲೇಖಕಿಯ ಮೊಬೈಲ್‌ಗೆ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದ. ನಿನ್ನನ್ನು ನೋಡ್ಬೇಕು, ಬಾ ಎಂದು ಕರೆಯುತ್ತಿದ್ದ. ಅಶ್ಲೀಲವಾಗಿ ಮೆಸೇಜ್‌ಗಳನ್ನು ಹತ್ತಾರು ಬಾರಿ ಕಳಿಸುತ್ತಿದ್ದ. ಇದರಿಂದ ನಮ್ಮ ಕುಟುಂಬದ ನೆಮ್ಮದಿ ಹಾಳಾಗಿತ್ತು ಎಂದು ಯುವ ಲೇಖಕಿ ತನ್ನ ಅಳಲು ತೋಡಿಕೊಂಡಿದ್ದಾಳೆ.

ಹಾದಿ ಮನಿಗೆ ಮೊದಲ ಬಾರಿ ವಾರ್ನಿಂಗ್ ಕೊಡಲಾಗಿತ್ತು. ಮತ್ತೆ ಅದೇ ಕೆಲಸ ಮಾಡಿದಾಗ ಪೊಲೀಸರ ಅತಿಥಿಯಾಗಿದ್ದಾನೆ. ಯುವತಿಯ ಮಾತುಗಳಲ್ಲಿ ಕೇಳಿ 'ನನ್ನ ಲೇಖನದ ಫೋಟೋ ನೋಡಿ ವ್ಯಂಗ್ಯಚಿತ್ರ ಬಿಡಿಸುವುದಾಗಿ ಹೇಳಿದ್ದ. ಹೆಂಗಸರನ್ನು ಸೊಂಟದ ಕಳೆಗೆ ಗುರುತಿಸೋ ಅವನು ಅದೆಂತಹ ಕಲಾವಿದ. ಮೊದಲ ಕರೆಗಳಲ್ಲಿ ನಾನು ನಿನ್ನನ್ನು ನೋಡ್ಬೇಕು ಬಾ ಎಂದು ಕರೆಯುತ್ತಿದ್ದ. ದಯವಿಟ್ಟು ಇವನನ್ನು ಶಿಕ್ಷೆಗೆ ಗುರಿಮಾಡಬೇಕೆಂದು ಸೂಚಿಸುತ್ತೇನೆ' ಎಂದು ಯುವ ಲೇಖಕಿ ಬರೆದಿದ್ದಾಳೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments