Select Your Language

Notifications

webdunia
webdunia
webdunia
webdunia

ಹಬ್ಬದ ದಿನ ಆತ್ಮಹತ್ಯೆ ಯತ್ನ; ಪತಿ ಸಾವು, ಪತ್ನಿ ಬಚಾವು.

ಹಬ್ಬದ ದಿನ ಆತ್ಮಹತ್ಯೆ ಯತ್ನ; ಪತಿ ಸಾವು, ಪತ್ನಿ ಬಚಾವು.
ಬೆಂಗಳೂರು , ಸೋಮವಾರ, 9 ಸೆಪ್ಟಂಬರ್ 2013 (11:16 IST)
PR
PR
ಹಬ್ಬದ ದಿನವೇ ದಂಪತಿಗಳು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಬಂಗಳೂರಿನ ಸಹಕಾರ ನಗರದಲ್ಲಿ ನಡೆದಿದೆ. ಪರಿಣಾಮವಾಗಿ ಪತಿರಾಯ ಸಾವಿಗೀಡಾಗಿದ್ದು, ಪತ್ನಿ ಮಾತ್ರ ಸಾವಿನ ದವಡೆಯಿಂದ ಬಚಾವ್‌ ಆಗಿದ್ದಾಳೆ. ಸಾವಿನ ದವಡೆಯಿಂದ ಬಚಾವ್‌ ಆಗಿರುವ ಪತ್ನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.

26 ವರ್ಷದ ಯಶ್ವಂತ ಮತ್ತು 25 ವರ್ಷದ ಮಹಾಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ ದುರ್ದೈವಿಗಳು. ನೆನ್ನೆ ರಾತ್ರಿಯ ಸಮಯದಲ್ಲಿ ಗಂಡ ಹೆಂಡತಿಯ ನಡುವೆ ಸಣ್ಣ ಜಗಳವಾಗಿದೆ. ಇದರಿಂದ ನೊಂದ ಪತಿ ಯಶ್ವಂತ್‌ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತಿಯನ್ನು ನೇಣುಬಿಗಿದ ಸ್ಥಿತಿಯಲ್ಲಿ ಕಂಡ ಪತ್ನಿ ಮಹಾಲಕ್ಷ್ಮಿ ಆಘಾತಕ್ಕೆ ಒಳಗಾಗಿದ್ದಾಳೆ. ಇದಕ್ಕೆಲ್ಲಾ ನೆನ್ನೆಯ ಜಗಳವೇ ಕಾರಣ ಎಂದು ಬೇಸತ್ತು ಆಕೆಯೂ ಕೂಡ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾಳೆ. ಆದ್ರೆ ಸ್ಥಳೀಯರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಯಶ್ವಂತ್‌ ಮತ್ತು ಮಹಾಲಕ್ಷ್ಮಿ ಪ್ರೀತಿಸಿ ಮದುವೆಯಾಗಿದ್ದರು. ನೂರಾರು ಆಸೆಗಳನ್ನು ಹೊತ್ತು ಕೇವಲ 5 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಅದ್ರೆ ಸಣ್ಣ ಜಗಳದಿಂದಾಗಿ ಪತಿ ನೆನ್ನೆ ಆತ್ಮಹತ್ಯೆ ಮಾಡಿಕೊಂಡಿರುವುದು ದರುಂತವೇ ಸರಿ. ಈ ಬಗ್ಗೆ ಕೊಡಿಗೆಹಳ್ಳಿ ಪೋಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada