Select Your Language

Notifications

webdunia
webdunia
webdunia
webdunia

ಸೋಲಿಸುವಂತಹ ತಪ್ಪು ನಾವೇನು ಮಾಡಿದ್ದೇವು: ಕಣ್ಣೀರಿಟ್ಟ ಕುಮಾರಸ್ವಾಮಿ

ಸೋಲಿಸುವಂತಹ ತಪ್ಪು ನಾವೇನು ಮಾಡಿದ್ದೇವು: ಕಣ್ಣೀರಿಟ್ಟ ಕುಮಾರಸ್ವಾಮಿ
, ಶನಿವಾರ, 22 ಮಾರ್ಚ್ 2014 (14:34 IST)
PR
PR
ರಾಮನಗರ: ರಾಮನಗರ ಉಪಚುನಾವಣೆಯಲ್ಲಿ ಪತ್ನಿ ಅನಿತಾರನ್ನು ಸೋಲಿಸಿದ್ದಕ್ಕೆ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಕಣ್ಣೀರಿಟ್ಟರು. ಸೋಲಿಸುವಂತಹ ತಪ್ಪು ನಾವೇನು ಮಾಡಿದ್ದೆವು ಎಂದು ಜೆಡಿಎಸ್ ಕಾರ್ಯಕರ್ತರಿಗೆ ಕುಮಾರಸ್ವಾಮಿ ಪ್ರಶ್ನೆಯನ್ನಿಟ್ಟರು. ಕೊಲೆಗಾರರಿಗೆ , ಕಲ್ಲು ಒಡೆಯುವವರಿಗೆ ಕಳೆದ ಉಪಚುನಾವಣೆಯಲ್ಲಿ ಮತ ನೀಡಿದ್ದೀರಿ. ಅನಿತಾಕುಮಾರ ಸ್ವಾಮಿ ಅವರಿಗೆ ಮೋಸ ಮಾಡಿದ್ದೀರಿ. ಈ ಬಾರಿ ಅಂತಹ ಮೋಸ ಮಾಡಬೇಡಿ. ನಾನು ಕ್ಷೇತ್ರದ ಅಭಿವೃದ್ಧಿಗೆ ನಾನು ಶ್ರಮಿಸಿದ್ದೇನೆ. ಆದ್ದರಿಂದ ಈ ಬಾರಿ ಜೆಡಿಎಸ್‌ಗೆ ಮತನೀಡಿ ಎಂದು ಕುಮಾರಸ್ವಾಮಿ ಬೇಡಿಕೊಂಡರು.

ಈ ಬಾರಿ ರಾಮನಗರದಿಂದ ಲೋಕಸಭೆಗೆ ಸ್ಪರ್ಧಿಸಬೇಕೆಂದು ರಾಮನಗರ ಕ್ಷೇತ್ರದ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಕಾಂಗ್ರೆಸ್ ವೀರಪ್ಪ ಮೊಯ್ಲಿಗೆ ಎದುರಾಗಿ ಚಿಕ್ಕಬಳ್ಳಾಪುರದಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇದರಿಂದ ರಾಮನಗರ ಕ್ಷೇತ್ರದ ಕಾರ್ಯಕರ್ತರಿಗೆ, ಮತದಾರರಿಗೆ ನಿರಾಶೆಯಾಗಿದೆ.

Share this Story:

Follow Webdunia kannada