Webdunia - Bharat's app for daily news and videos

Install App

ಸಿದ್ರಾಮಯ್ಯ ಕರ್ನಾಟಕದ ನರೇಂದ್ರ ಮೋದಿ - ಅಂಬಿ

Webdunia
ಸೋಮವಾರ, 19 ಆಗಸ್ಟ್ 2013 (15:23 IST)
PR
PR
ಸಿಎಂ ಸಿದ್ರಾಮಯ್ಯನವರು ಕಾಂಗ್ರೆಸ್‌ನ ನರೇಂದ್ರ ಮೋದಿ ಇದ್ದಂಗೆ. ನರೇಂದ್ರ ಮೋದಿಯನ್ನು ಬಿಜೆಪಿ ದೇಶದೆಲ್ಲೆಡೆ ರೋಲ್ ಮಾಡೆಲ್ ಆಗಿ ಬಿಂಬಿಸುತ್ತಿದೆ. ಅದೇ ರೀತಿ ಮುಂದೊಂದು ದಿನ ಸಿದ್ರಾಮಯ್ಯನವರನ್ನು ಕೂಡ ಇಡೀ ದೇಶ ಕೊಂಡಾಡುವ ಕಾಲ ಬಂದೇ ಬರುತ್ತೆ" ಎಂದು ವಸತಿ ಸಚಿವ ಅಂಬರೀಷ್ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದಾರೆ.

ಮೈಸೂರಿನ ಕೆಆರ್‌ ನಗರದ ಕಾಂಗ್ರೆಸ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವಸತಿ ಸಚಿವ ಅಂಬರೀಷ್ ಸಿಎಂ ಸಿದ್ರಾಮಯ್ಯನವರನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಹೋಲಿಸಿ ಮಾತನಾಡಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ಅದ್ಬುತ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಈ ಉಪಚುನಾವಣೆಯಲ್ಲಿ ಸಿದ್ರಾಮಯ್ಯನವರನ್ನು ಬೆಂಬಲಿಸಬೇಕು ಎಂದು ಮತದಾರರನ್ನು ಓಲೈಸುವ ಸಮಯದಲ್ಲಿ "ಗುಜರಾತಿನ ನರೇಂದ್ರ ಮೋದಿ ಬಿಜೆಪಿಗೆ ಇಮೇಜ್ ತಂದುಕೊಟ್ಟಿರುವಂತೆ, ಕರ್ನಾಟಕದ ಸಿದ್ರಾಮಯ್ಯನವರು ಕಾಂಗ್ರೆಸ್‌ ಇಮೇಜನ್ನು ಹೆಚ್ಚಿಸಿದ್ದಾರೆ. ಮುಂದೊಂದು ದಿನ ಸಿದ್ರಾಮಯ್ಯನವರನ್ನು ದೇಶವೇ ಕೊಂಡಾಡುತ್ತದೆ. ನನ್ನ ಬಾಯಲ್ಲಿ ಮಚ್ಚೆ ಇದೆ. ನಾನು ಹೇಳೋದು ಸುಳ್ಳಲ್ಲ" ಎಂದು ಅಂಬಿ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಕೂಡ ಪರೋಕ್ಷವಗಿ ನರೇಂದ್ರ ಮೋದಿಯವರಿಂದ ಪ್ರಭಾವಿತವಾಗಿದೆ ಎಂಬುದನ್ನು ವಸತಿ ಸಚಿವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments