Webdunia - Bharat's app for daily news and videos

Install App

ಸಿದ್ದರಾಮಯ್ಯ ನಿನಗೆ ಮದ ಬಂದಿದೆ :ಯಡ್ಡಿ ಮತ್ತೆ ಏಕವಚನ ಪ್ರಯೋಗ

Webdunia
ಬುಧವಾರ, 27 ನವೆಂಬರ್ 2013 (15:15 IST)
PR
PR
ಬೆಳಗಾವಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಮತ್ತೆ ಏಕವಚನ ಪ್ರಯೋಗಿಸುವ ಮೂಲಕ ತಮ್ಮ ಹಿಂದಿನ ಚಾಳಿಯನ್ನು ಮುಂದುವರಿಸಿದ್ದಾರೆ. 'ಸಿದ್ದರಾಮಯ್ಯ ನಿನ್ನ ಅಹಂಕಾರಕ್ಕೆ ರೈತ ಬಲಿಯಾಗಿದ್ದಾನೆ. ಕಾಂಗ್ರೆಸ್ ಸರ್ಕಾರದಿಂದ ರೈತರಿಗೆ ಅನಿಷ್ಠ ಕಾದಿದೆ. ನೀವು ಕೂಡಲೇ ರಾಜೀನಾಮೆ ನೀಡ ಿ' ಎಂದು ಯಡಿಯೂರಪ್ಪ ಬೆಳಗಾವಿ ಸದನದಲ್ಲಿ ಆಗ್ರಹಿಸಿದರು. ರಾಯಭಾಗದ ಕಂಕನವಾಡಿ ಗ್ರಾಮದ ರೈತ ವಿಠಲ್ ಅರಬಾವಿ ಸುವರ್ಣಸೌಧದ ಮುಂಭಾಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನ ೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಆಕ್ರೋಶಭರಿತರಾಗಿ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯ ರಾಜೀನಾಮೆ ನೀಡಿ ಮೈಸೂರಿಗೆ ತೆರಳಿ, ರೈತರಿಗೆ ಸ್ಪಷ್ಟ ಭರವಸೆ ನೀಡಲು ವಿಫಲರಾಗಿದ್ದೀರಿ.

ನಿನ್ನ ಅಹಂಕಾರಕ್ಕೆ ರೈತ ಬಲಿಯಾಗಿದ್ದಾನೆ. ಯಾವ ವಿಚಾರಕ್ಕೂ ಸರ್ಕಾರ ಸ್ಪಂದಿಸುತ್ತಿಲ್ಲ. ಸಿದ್ದರಾಮಯ್ಯ ಹಣ ನೀಡಿದ್ದರೆ ಅವರ ಜೇಬಿನಿಂದ ಖರ್ಚಾಗುತ್ತಿರಲಿಲ್ಲ ಎಂದು ಯಡಿಯೂರಪ್ಪ ವಾಗ್ದಾಳಿ ಮಾಡಿದರು. ಬರೀ ಸೊಕ್ಕು, ದೌರ್ಜನ್ಯದ ಮಾತುಗಳೇ ಕೇಳಿಬರುತ್ತಿವೆ. ಸೌಜನ್ಯದ ಮಾತುಗಳೇ ಇಲ್ಲ. ಕೂಡಲೇ ರಾಜೀನಾಮೆ ನೀಡಿ ಎಂದು ಯಡಿಯೂರಪ್ಪ ಸದನದಲ್ಲಿ ಆಗ್ರಹಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments