ಸಿಎಂ ಬೆಸ್ಟ್, ಕೆಲವು ಸಚಿವರು ಇದ್ದೂ ಕೂಡ ವೇಸ್ಟ್'
ಕಾರವಾರ , ಬುಧವಾರ, 4 ಡಿಸೆಂಬರ್ 2013 (14:55 IST)
ಸಿಎಂ ಬೆಸ್ಟ್, ಕೆಲವು ಸಚಿವರು ಇದ್ದೂ ಕೂಡ ವೇಸ್ಟ್ ಹೀಗೆ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಕಾಂಗ್ರೆಸ್ ಸರ್ಕಾರದ ಕೆಲವು ಸಚಿವರ ಕಾರ್ಯವೈಖರಿ ಕುರಿತು ಅತೃಪ್ತಿ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕ್ಯಾಬಿನೆಟ್ನಲ್ಲಿರುವ ಕೆಲವು ಸಚಿವರ ಕಾರ್ಯವೈಖರಿ ತಮಗೆ ತೃಪ್ತಿ ತಂದಿಲ್ಲ ಎಂದು ರಾಜ್ಯಪಾಲರು ಹೇಳಿದರು. ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ನೌಕಾಸಪ್ತಾಹ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು, ವಿಧ ವಿವಿ ಕುಲಪತಿಗಳ ನೇಮಕಾತಿ ಬಗ್ಗೆ ಮುಖ್ಯಮಂತ್ರಿ ಗಮನಹರಿಸಬೇಕಿತ್ತು ಎಂದು ಹೇಳಿದರು. ರಾಮನಗರದಲ್ಲಿ ವಿವಿಯ ಕಟ್ಟಡ ನಿರ್ಮಾಣ ಬೇಡ. ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಸಾಕಷ್ಟು ಸ್ಥಳಾವಕಾಶ ಇದೆ ಎಂದು ರಾಜ್ಯಪಾಲರು ತಿಳಿಸಿದರು. ನಾನು ಕಂಡಂತೆ ಸಿಎಂ ಒಳ್ಳೆಯ ಮುಖ್ಯಮಂತ್ರಿ. ವ್ಯಕ್ತಿಗತವಾಗಿ ಸಿದ್ದರಾಮಯ್ಯ ಯಾವುದೇ ಆರೋಪಕ್ಕೀಡಾಗಿಲ್ಲ ಎಂದು ಭಾರದ್ವಾಜ್ ಹೇಳಿದರು.