Webdunia - Bharat's app for daily news and videos

Install App

ಸತತ 6 ಗಂಟೆಗಳ ಅತ್ಯಾಚಾರ: ಸಿಸಿಟಿವಿ ಕ್ಯಾಮೆರಾಗಳಿಂದ ಆರೋಪಿಗಳ ಸುಳಿವು

Webdunia
ಸೋಮವಾರ, 31 ಮಾರ್ಚ್ 2014 (17:45 IST)
ಹೈದರಾಬಾದ್: ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಯುವತಿ ಮೇಲೆ ದುಷ್ಕರ್ಮಿಗಳು ಸತತ 6 ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ. ಶನಿವಾರ ಸಂಜೆ ನಡೆದಿದ್ದ ಪ್ರಕರಣ ಇಂದು ಬೆಳಕಿಗೆ ಬಂದಿದೆ. ಸತತ 6 ಗಂಟೆಗಳ ಕಾಲ ಕಿರುಕುಳ, ಅತ್ಯಾಚಾರವನ್ನು ದುಷ್ಕರ್ಮಿಗಳು ನಡೆಸಿದ್ದಾರೆಂದು ದುರ್ದೈವಿ ಯುವತಿ ಆರೋಪಿಸಿದ್ದಾಳೆ. ಯುವತಿಯ ಹೆಸರನ್ನು ಪೊಲೀಸರು ಗೌಪ್ಯವಾಗಿರಿಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಸತೀಶ್ ಮತ್ತು ವೆಂಕಟೇಶ್ವರುಲು ಎಂಬ ಕ್ಯಾಬ್ ಚಾಲಕರನ್ನು ಬಂಧಿಸಲಾಗಿದೆ. ಮೊದಲಿಗೆ ಸುಳ್ಳುಪ್ರಕರಣವೆಂದು ಪೊಲೀಸರು ದಾಖಲು ಮಾಡಿರಲಿಲ್ಲ. ಆದರೆ ಕಮೀಷನರ್ ಆದೇಶದ ಮೇಲೆ ಪ್ರಕರಣ ದಾಖಲಿಸಲಾಯಿತು.

ಶನಿವಾರ ರಾತ್ರಿ ಸಾಫ್ಟ್‌ವೇರ್ ಎಂಜಿನಿಯರ್‌ ಮಾಲ್‌ಗೆ ಶಾಪಿಂಗ್‌ಗೆ ಬಂದ ಸಂದರ್ಭದಲ್ಲಿ ಅವಳನ್ನು ಕ್ಯಾಬ್‌ನಲ್ಲಿ ಕರೆದುಕೊಂಡು ಹೋಗಿ ಸುಮಾರು ಸತತ 6 ಗಂಟೆಗಳ ಕಾಲ ಅತ್ಯಾಚಾರ , ಕಿರುಕುಳ ನೀಡಿದ್ದಾರೆಂದು ಯುವತಿ ಆರೋಪಿಸಿದಳು. ಹೈದರಾಬಾದ್ ಮೈಂಡ್ ಸ್ಪೇಸ್ ಶಾಲೆ ಬಳಿ ಈ ಘಟನೆ ನಡೆದಿದೆ. ಪೊಲೀಸರಿಗೆ ದೂರು ನೀಡಿದಾಗ ಅವರು ಪ್ರಕರಣವನ್ನು ಮೊದಲು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.
ಘಟನೆ ನಡೆದಿದ್ದು ಹೇಗೆ-ಮುಂದಿನ ಪುಟದಲ್ಲಿ ಮಾಹಿತಿ

PR
PR
ಐಟಿ ಸಿಟಿ ಮಾಧಾಪುರದ ಶಾಪಿಂಗ್ ಮಾಲ್ ಬಳಿ ಈ ದುರ್ಘಟನೆ ನಡೆದಿದೆ. ಶಾಪಿಂಗ್‌ ನಡೆಸಲು ಮಾಲ್‌ಗೆ ಹೋಗಿದ್ದ ಯುವತಿ ವಾಪಸು ಮನೆಗೆ ಹೋಗುವಾಗ ಕ್ಯಾಬ್‌ಗಾಗಿ ಹುಡುಕುತ್ತಿದ್ದಳು. ಆದ ಸತೀಶ್ ಮತ್ತು ವೆಂಕಟೇಶ್ವರಲು ಅವಳ ಬಳಿ ಕ್ಯಾಬ್ ತಂದು ನಿಲ್ಲಿಸಿದರು. ಕ್ಯಾಬ್ ಪ್ರಯಾಣ ದರದ ಬಗ್ಗೆ ಸ್ವಲ್ಪ ಚೌಕಾಸಿ ಮಾಡಿದ ಬಳಿಕ ಯುವತಿ ಕ್ಯಾಬ್‌ನಲ್ಲಿ ಕುಳಿತಳು. ಯುವತಿ ಕ್ಯಾಬ್‌ನೊಳಗೆ ಕುಳಿತಾಗ ಕ್ಯಾಬ್‌ನಲ್ಲಿ ಇಬ್ಬರು ಪುರುಷರು ಕುಳಿತಿದ್ದು ಕಂಡುಬಂತು. ನಗರದ ಹೊರವಲಯದ ಕೊಲ್ಲೂರು ಅರಣ್ಯದತ್ತ ಕ್ಯಾಬ್ ಹೊರಟಾಗ ಯುವತಿ ಕೂಗಿಕೊಂಡಳು ಮತ್ತು ಸ್ನೇಹಿತೆಗೆ ಕೂಡ ಕರೆ ಮಾಡಿದಳು. ಪುರುಷರು ಅವಳಿಂದ ಮೊಬೈಲ್ ಕಿತ್ತುಕೊಂಡು ಕಾರಿನಲ್ಲೇ ಸತತ 6 ಗಂಟೆಗಳ ಕಾಲ ರೇಪ್ ಮಾಡಿದರು.

ವಿಧಿವಿಜ್ಞಾನ ವರದಿ ರೇಪ್ ಮಾಡಿರುವುದನ್ನು ದೃಢಪಡಿಸಿದೆ. ನಂತರ ಪೊಲೀಸರು ಸಮೀಪದ ಶಾಲೆಯ ವಿಡಿಯೋ ಫೂಟೇಜ್‌ನಲ್ಲಿ ಕಾರು ಹಾದುಹೋಗಿರುವ ದೃಶ್ಯ ಕಂಡುಬಂತು. ಪೊಲೀಸರು ಕಾರು ಯಾವ ಕಂಪನಿಯದ್ದು ಎಂದು ಗುರುತಿಸಲು ಎನ್‌ಐಎ ನೆರವನ್ನು ಪಡೆದು, ವೋಲ್ವೋ ಕಾರನ್ನು ಪತ್ತೆಹಚ್ಚಿದರು ಮತ್ತು ಇಬ್ಬರು ಆರೋಪಿಗಳನ್ನು ಬಂಧಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments