Select Your Language

Notifications

webdunia
webdunia
webdunia
webdunia

ಸಚಿವರಾಗಿ ಅಂಬಿ: ಮಂಡ್ಯದಲ್ಲಿ ಭರ್ಜರಿ ವಿಜಯೋತ್ಸವ

ಸಚಿವರಾಗಿ ಅಂಬಿ: ಮಂಡ್ಯದಲ್ಲಿ ಭರ್ಜರಿ ವಿಜಯೋತ್ಸವ
ಮಂಡ್ಯ , ಭಾನುವಾರ, 19 ಮೇ 2013 (12:59 IST)
PTI
ರಾಜ್ಯ ಸಚಿವ ಸಂಪುಟದಲ್ಲಿ ಅಂಬರೀಶ್‌ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವುದಕ್ಕೆ ಮಂಡ್ಯದ ಸಂಜಯ ವೃತ್ತದಲ್ಲಿ ಕಾಂಗ್ರೆಸ್‌ನ ಮುಸ್ಲಿಂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಅಂಬರೀಶ್‌ ಸಚಿವರಾಗಿರುವುದಕ್ಕೆ ಕಾರ್ಯಕರ್ತರು ಸಂಮ್ರಮ ವ್ಯಕ್ತಪಡಿಸಿದರು. ಅಂಬರೀಶ್‌ ಅಭಿಮಾನಿಗಳ ಸಂಘದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ರಫಿವುಲ್ಲಾ ಮಾತನಾಡಿ, ಮಂಡ್ಯ ಜಿಲ್ಲೆಗೆ ಅಂಬರೀಶ್‌ ಹೇಳಿ ಮಾಡಿಸಿದಂತಹ ನಾಯಕರು. ಅವರಿಗೆ ಸಚಿವ ಸ್ಥಾನ ನೀಡಿರುವುದು ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಸಂತಸ ತಂದಿದೆ ಎಂದರು.

ಜಿಲ್ಲೆಯ ಅಭಿವೃದ್ಧಿಗೆ ಅಂಬರೀಶ್‌ ಅವರು ಶ್ರಮಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಸಮಗ್ರ ಅಭಿವೃದ್ಧಿ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖಂಡರಾದ ಜಾಕೀರ್‌, ಸಫಿ, ಮುಜಾಯಿದ್‌, ಮುನ್ನಾ, ಸಯ್ಯದ್‌ ಇತರರು ಭಾಗವಹಿಸಿದ್ದರು.

Share this Story:

Follow Webdunia kannada