Webdunia - Bharat's app for daily news and videos

Install App

ಸಕ್ಕರೆ ಕಾರ್ಖಾನೆ ಆಸೆ ತೋರಿಸಿ ರೈತರಿಗೆ ಮಕ್ಮಲ್ ಟೋಪಿ

Webdunia
ಮಂಗಳವಾರ, 6 ಆಗಸ್ಟ್ 2013 (14:16 IST)
PR
PR
ಗಂಗಾವತಿ: 20 ವರ್ಷಗಳಿಂದ ನಿಂತು ಹೋಗಿರುವ ಸಕ್ಕರೆ ಕಾರ್ಖಾನೆಯನ್ನು ಪುನಃ ಆರಂಭಿಸುವುದಾಗಿ ಜನರನ್ನು ನಂಬಿಸಿ, ಕಂಪೆನಿಯ ಷೇರು ಎಂದು ಹೇಳಿ ಜನರಿಂದ ಕೋಟ್ಯಂತರ ರೂ. ಸಂಗ್ರಹಿಸಿದ ಅನಿವಾಸಿ ಭಾರತೀಯ ವಿನೋದ್ ಎಂಬವ ಕೊನೆಗೆ ಜನರಿಗೆ ಮಕ್ಮಲ್ ಟೋಪಿ ಹಾಕಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ನನಗೆ ವಿದೇಶದಲ್ಲಿ ಸಕ್ಕರೆ ಕಾರ್ಖಾನೆಗಳಿವೆ. ನಿಂತು ಹೋಗಿರುವ ಸಕ್ಕರೆ ಕಾರ್ಖಾನೆ ಆರಂಭಿಸುತ್ತೇನೆ ಎಂದು ಜನರನ್ನು ನಂಬಿಸಿದ್ದ. ಪ್ರತಿ ಬಾರಿ ಗಂಗಾವತಿಗೆ ಬರುವಾಗ ಹೆಲಿಕಾಪ್ಟರ್‌ನಲ್ಲಿ ಬಂದು ಜನರನ್ನು ಮರಳುಮಾಡುತ್ತಿದ್ದ. ಅವನು ಧರಿಸುತ್ತಿದ್ದ ಠಾಕು,ಠೀಕಾದ ಉಡುಪು, ಮಾತನಾಡುವ ವೈಖರಿ, ಶ್ರೀಮಂತಿಕೆಯ ಸೋಗಿನಿಂದ ರೈತರನ್ನು ಸಂಪೂರ್ಣ ಬೇಸ್ತು ಬೀಳಿಸಿದ್ದ. ಇದರ ಜತೆ ಸ್ಥಳೀಯರು ಕೆಲವರ ಜತೆ ಸೇರಿಕೊಂಡು ಕಾರ್ಖಾನೆ ಆರಂಭಿಸಲು ಹಣಸಂಗ್ರಹದಲ್ಲಿ ತೊಡಗಿದ್ದ.

ಗಂಗಾವತಿಯಲ್ಲಿ ಸಕ್ಕರೆ ಕಾರ್ಖಾನೆಯ ಕನಸು ಕಂಡು ನೂರಾರು ಜನರು ಸಾವಿರಾರು ರೂ. ಷೇರುಗಳನ್ನು ಖರೀಸಿದ್ದರು. ಸುಮಾರು ಮೂರು ನಾಲ್ಕು ಕೋಟಿ ರೂ.ಗಳನ್ನು ಸಂಗ್ರಹಿಸಿದ್ದ ವಿನೋದ್ ಒಂದು ದಿನ ಕೆಲವು ಸ್ಥಳೀಯ ಜನರ ಜತೆ ಏಕಾಏಕಿ ಕಣ್ಮರೆಯಾಗಿದ್ದಾನೆ. ಸಕ್ಕರೆ ಕಾರ್ಖಾನೆಯ ಕನಸು ಕಂಡ ಜನರು ತೀವ್ರ ನಿರಾಶರಾಗಿ ತಲೆ ಮೇಲೆ ಕೈಹೊತ್ತುಕೊಂಡು ಕುಳಿತಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments