Select Your Language

Notifications

webdunia
webdunia
webdunia
webdunia

ಸಂಸತ್‌ಗೆ ಅತೀ ಕಡಿಮೆ ಹಾಜರಿಯಾದ ಎಚ್ಡಿಕೆ: ಸಿಎಂ

ಸಂಸತ್‌ಗೆ ಅತೀ ಕಡಿಮೆ ಹಾಜರಿಯಾದ ಎಚ್ಡಿಕೆ: ಸಿಎಂ
ಬೆಂಗಳೂರು , ಗುರುವಾರ, 8 ಆಗಸ್ಟ್ 2013 (09:06 IST)
PR
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ವಿರುದ್ಧವೂ ಹರಿಹಾಯ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ನಾಲ್ಕು ವರ್ಷಗಳ ಕಾಲ ಸಂಸದರಾಗಿದ್ದರು. ಸಂಸತ್‌ಗೆ ಅತೀ ಕಡಿಮೆ ಹಾಜರಿಯಾದ ಏಕೈಕ ಕನ್ನಡಿಗ ಎಂದು ಲೇವಡಿ ಮಾಡಿದರು.

ತಮ್ಮನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದು ತಾವೇ ಎನ್ನುವ ದೇವೇಗೌಡರು, ಅವರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸಿಗರು ಎನ್ನುವುದನ್ನು ಮಾತ್ರ ಎಲ್ಲಿಯೂ ಹೇಳುವುದಿಲ್ಲ. ತಮಗೆ ನೆರವು ನೀಡಿದವರನ್ನು ನೆನೆಸಿಕೊಳ್ಳದೇ ಅಭಿವೃದ್ಧಿಗೆ ಕೊಳ್ಳಿ ಇಡುತ್ತಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಈಗಾಗಲೇ ಬಿಜೆಪಿ ನಾಯಕರು ಜೈಲು ವಾಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಾಯಕರು ಜೈಲಿಗೆ ಹೋಗಲಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಜೆಡಿಎಸ್‌ಗೆ ಜ್ಯಾತ್ಯಾತೀತ ಪದ ಬಳಸುವ ನೈತಿಕತೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದ್ದಾರೆ.

Share this Story:

Follow Webdunia kannada