Webdunia - Bharat's app for daily news and videos

Install App

ಶ್ರೀಮಂತ ವ್ಯಾಪಾರಿಯ ಪುತ್ರನನ್ನು ಅಪಹರಿಸಿದ ಇಬ್ಬರು ಪಾತಕಿಗಳ ಬಂಧನ

Webdunia
ಶುಕ್ರವಾರ, 31 ಜನವರಿ 2014 (16:36 IST)
PR
PR
ಹುಬ್ಬಳ್ಳಿ: ಚಿನ್ನದ ವ್ಯಾಪಾರಿ ವಿನೋದ್ ತೆಲಿಸಾರ ಪುತ್ರ ವೃಷಭ್‌ನನ್ನು ಅಪಹರಿಸಿ ಹಣವಸೂಲಿ ಮಾಡುತ್ತಿದ್ದ ವಿಕ್ಕಿ ಪೂಜಾರಿ ಮತ್ತು ಸಂತೋಷ್ ವಡ್ಡರ್ ಎಂಬ ಪಾತಕಿಗಳಿಗೆ ಪೊಲೀಸರು ಬಲೆ ಬೀಸಿ ಬಂಧಿಸಿದ್ದಾರೆ. ವಿಕ್ಕಿಪೂಜಾರಿ ಮತ್ತು ಸಂತೋಷ್ ಶ್ರೀಮಂತರನ್ನು ಟಾರ್ಗೆಟ್ ಮಾಡಿ ಹಣ ವಸೂಲಿ ಮಾಡುತ್ತಿದ್ದರೆಂದು ಹೇಳಲಾಗಿದೆ. ಭೂಗತ ಲೋಕದ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಇವರು ಪಾತಕ ಕೃತ್ಯಗಳನ್ನು ಎಸಗುತ್ತಿದ್ದರು.. ಕೇಶ್ವಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಅವರಿಬ್ಬರನ್ನು ಬಂಧಿಸಿದ್ದಾರೆ.

ಮೊದಲಿಗೆ ವೃಷಭ್ ಸ್ನೇಹಿತ ನವರತ್ನನನ್ನು ಅಪಹರಿಸಿ ನಂತರ ಅವನಿಗೆ ಚಾಕುತೋರಿಸಿ ಬೆದರಿಸಿ ವೃಷಬ್‌ನನ್ನು ಸ್ಥಳಕ್ಕೆ ಬರುವಂತೆ ಮಾಡಿದ್ದ. ವಿಕ್ಕಿ ಪೂಜಾರಿ ತಾನು ಭೂಗತ ದೊರೆ ಎಂಬ ಇಮೇಜ್ ಕ್ರಿಯೇಟ್ ಮಾಡುವ ಆಸೆ ಇಟ್ಟುಕೊಂಡಿದ್ದ. ಮಂಗಳೂರು ಮೂಲದವನು ಅಂತ ಇವನು ತಿಳಿದುಬಂದಿದ್ದು, ಕೋಮುಗಲಭೆ, ಜೀವಬೆದರಿಕೆ ಹಾಕಿದ ಪ್ರಕರಣಗಳಲ್ಲೂ ಭಾಗಿಯಾದ ಬಗ್ಗೆ ಮಾಹಿತಿ ಸಿಕ್ಕಿದೆ.

ಇವನು ಶ್ರೀಮಂತರ ಮಕ್ಕಳನ್ನು ಅಪಹರಿಸಿ ಹಣ ವಸೂಲಿ ಮಾಡುವ ದಂಧೆಗೆ ಕೈ ಹಾಕಿದ್ದ. ಇವನ ಬೆದರಿಕೆಗೆ ಹೆಸರಿದ ವೃಷಭ್ ಹೆದರಿಕೊಂಡು ಕೈಗೆ ಸಿಕ್ಕಿದಷ್ಟು ಹಣ ಮತ್ತು ಬಂಗಾರವನ್ನು ತೆಗೆದುಕೊಂಡು ವಿಕ್ಕಿ ಪೂಜಾರಿಗೆ ಕೊಟ್ಟಿದ್ದ. ಆಗ ವೃಷಭ್‌ನನ್ನು ಮತ್ತೊಮ್ಮೆ ಬ್ಲಾಕ್‌ಮೇಲ್ ಮಾಡುವುದಕ್ಕೆ ಪ್ರಯತ್ನಿಸಿದಾಗ, ಪೊಲೀಸರು ಬಲೆ ಬೀಸಿ ಅವರಿಬ್ಬರನ್ನು ಬಂಧಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments