ಮದುವೆಗಳು ಸ್ವರ್ಗದಲ್ಲಿ ನಿಶ್ಚಿತವಾಗಿರುತ್ತದೆ ಎಂದು ಹೇಳಲಾಗುತ್ತದೆ ಆದರೆ ಡೈವೋರ್ಸ ಮಾತ್ರ ಕೋರ್ಟ್ಗಳಲ್ಲಿ ಆಗುತ್ತವೆ. ಬೆಂಗಳೂರಿನ ಹೆಣ್ಣೂರಿನಲ್ಲಿ ಸೈನಿಕನೊಬ್ಬನ ಪತ್ನಿ ತನ್ನ ಗಂಡನಿಗೆ ಡೈವೋರ್ಸ್ ನೀಡಿದ್ದಾಳೆ. ಆದರೆ ಇದು ಸೈನಿಕನಿಗೆ ಇಷ್ಟವಿರಲಿಲ್ಲ. ತನ್ನ ಪತ್ನಿ ತನ್ನಗೆ ಡೈವೋರ್ಸ ನೀಡಿದ್ದಾಳೆ ಎಂಬ ಕಾರಣಕ್ಕೆ ಕೋಪಗೊಂಡ ಸೈನಿಕ ವೃತಿಯಲ್ಲಿರುವ ಪ್ರಭಾಕರ್ ತನ್ನ ಹೆಂಡತಿಯಾದ ಕೀರ್ತನಾಗೆ ಚಾಕುವಿನಿಂದ ಇರಿದಿದ್ದಾನೆ. ಇಷ್ಟೆ ಅಲ್ಲ ಈತ ತನ್ನ ಮಗಳು ಅಶ್ವಥಿ ಮತ್ತು ಹೆಂಡತಿಯ ತಂದೆ ತಾಯಿಗಳ ಮೇಲೂ ಕೂಡ ಹಲ್ಲೆ ಮಾಡಿದ್ದಾನೆ. ಇದಕ್ಕೆಲ್ಲ ಕಾರಣ ಹೆಂಡತಿ ಡೈವೋರ್ಸ ನೀಡಿದ್ದು ಎಂದು ಹೇಳಲಾಗುತ್ತಿದೆ.
ಈ ಪ್ರಕರಣದ ಹಿಂದೆ ಜಮೀನು ಇದೆ ಎಂದು ಹೇಳಲಾಗುತ್ತಿದೆ. ಪ್ರಭಾಕರ್ ತನ್ನ ಹೆಂಡತಿ ಕೀರ್ತನಾ ಜೊತೆಗೂಡಿ ಬೆಂಗಳೂರಿನಲ್ಲಿ ಭೂಮಿಯೊಂದನ್ನು ಖರೀದಿಸಿದ್ದರು. ಈ ಜಮೀನು ಪ್ರೀತಿಯಿಂದ ತನ್ನ ಹೆಂಡತಿ ಹೆಸರಿಗೆ ಮಾಡಿಸಿದ್ದನು.
ಆದರೆ ಈತನ ಹೆಂಡತಿ ಕೀರ್ತನಾ ತನಗೆ ಜಮೀನು ಬಂದ ತಕ್ಷಣ ತನ್ನ ಪತಿಗೆ ಡೈವೋರ್ಸ್ ನೀಡಿದ್ದಾಳೆ. ಹೆಂಡತಿಯ ಮೇಲಿನ ಪ್ರೀತಿಯ ಮತ್ತು ಮೋದಿಂದ ಹೆಂಡತಿಯ ಹೆಸರಿಗೆ ಜಮೀನು ಮಾಡಿದ್ದರಿಂದ ಹೆಂಡತಿ ನೀಡಿದ ಉಡುಗೋರೆ ಎನಂದರೆ ಈ ಡೈವೋರ್ಸ್ . ಇದರಿಂದ ಕೋಪಗೊಂಡ ಸೈನಿಕ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.