Webdunia - Bharat's app for daily news and videos

Install App

ಶಿವಾಜಿ- ಚಿತ್ರ ಮಂದಿರ ಧ್ವಂಸ ಎಚ್ಚರಿಕೆ

ಇಳಯರಾಜ
ಶುಕ್ರವಾರ, 15 ಜೂನ್ 2007 (13:10 IST)
ನಾಳೆ ಬಿಡುಗಡೆಗೊಳ್ಳುತ್ತಿರುವ ಸೂಪರ್ ಸ್ಟಾರ್ ಶಿವಾಜಿ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆಗೊಳಿಸಿದಲ್ಲಿ ಚಿತ್ರಮಂದಿರಗಳನ್ನು ಧ್ವಂಸಗೊಳಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.

ಒಂದೆಡೆ ಬೆಂಗಳೂರಿನಲ್ಲಿ ಭಾರೀ ಚಿತ್ರದ ಟಿಕೆಟ್ ಪಡೆಯಲು ನೂಕು ನುಗ್ಗಲು ಆರಂಭವಾಗಿದ್ದರೆ, ಇದನ್ನು ಪ್ರದರ್ಶಿಸ ಕೂಡದು ಎಂಬ ಹೋರಾಟ ಆರಂಭಗೊಂಡಿದೆ. ಕಾವೇರಿ ಸಮಸ್ಯೆಗಳು ಬಗೆಹರಿಯದೆ ತಮಿಳು ಚಿತ್ರವನ್ನು ಕರ್ನಾಟಕದಲ್ಲಿ ಪ್ರದರ್ಶಿಸಕೂಡದು ಎಂಬುದು ಕನ್ನಡ ಹೋರಾಟಗಾರರ ಒತ್ತಾಯ.

ಬೆಂಗಳೂರಿನ ಹತ್ತು ಚಿತ್ರ ಮಂದಿರಗಳಲ್ಲಿ ನಾಳೆ ಏಕಕಾಲದಲ್ಲಿ ಬಿಡುಗಡೆಗೊಳ್ಳುವ ಶಿವಾಜಿ ಚಿತ್ರ ಪ್ರದರ್ಶನಕ್ಕೆ ಭಾರೀ ಭದ್ರತೆಯನ್ನು ಪೊಲೀಸರು ಒದಗಿಸಲಿದ್ದಾರೆ. ಟಿಕೆಟೊಂದಕ್ಕೆ 300 ರೂ ವರೆಗೂ ಬ್ಲಾಕ್ ನಲ್ಲಿ ಮಾರಾಟವಾಗುತ್ತಿರುವುದು ರಜನೀಕಾಂತ್ ಜನಪ್ರಿಯತೆಯ ದ್ಯೋತಕವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಾಜಿ ಚಿತ್ರದ ಕರ್ನಾಟಕದ ವಿತರಣೆಗಾರ ಹೆಚ್.ಟಿ.ಗಂಗರಾಜ್ ರಜನೀಕಾಂತ್ ಕನ್ನಡದವರು. ಇಲ್ಲೇ ಬೆಳೆದವರು. ಆದ್ದರಿಂದ ಅವರ ಚಿತ್ರದ ಪ್ರದರ್ಶನಕ್ಕೆ ವಿರೋಧ ಮಾಡಕೂಡದು ಎಂದು ಸಲಹೆ ಮಾಡಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments