ಬೆಂಗಳೂರು: ಶಿವರಾತ್ರಿ ಹಬ್ಬದ ಪ್ರಯುಕ್ತ ನಾಡಿನೆಲ್ಲೆಡೆ ಸಂಭ್ರಮ ಮನೆಮಾಡಿದ್ದು, ನಾಡಿನ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಬ್ರಹ್ಮಕುಮಾರಿ ಸೇವಾಶ್ರಮವು 35 ಅಡಿ ಎತ್ತರದ ಕೇದಾರನಾಥ ದೇವಾಲಯವನ್ನು ಹೆಬ್ಬಾಳದಲ್ಲಿ ನಿರ್ಮಾಣ ಮಾಡಿದ್ದು, ಶಿವಭಕ್ತರು ಅಲ್ಲಿ ಬೆಳಗಿನಿಂದಲೇ ಶಿವಲಿಂಗಗಳ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ಬಸವನಗುಡಿಯ ಗವಿಗಂಗಾಧೇಶ್ವರ ದೇವಾಲಯಕ್ಕೆ ಭಕ್ತರ ದಂಡೇ ಹರಿದುಬರುತ್ತಿದ್ದು, ಪೂಜೆ, ಪುನಸ್ಕಾರಗಳು ನಡೆದಿವೆ. ದಕ್ಷಿಣ ಕಾಶಿ ಗೋಕರ್ಣದಲ್ಲಿ ಮಹಾಶಿವರಾತ್ರಿ ಸಂಭ್ರಮದಿಂದ ನಡೆದಿದೆ. ಆತ್ಮಲಿಂಗ ದರ್ಶನಕ್ಕೆ ನೂರಾರು ಭಕ್ತರು ನೆರೆದಿದ್ದಾರೆ.