ವ್ಯಕ್ತಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ 22 ಶಾಸಕರಿಗೆ, ಇಬ್ಬರು ಸಚಿವರಿಗೆ ಹೈಕೋರ್ಟ್ ನೋಟೀಸ್ ನೀಡಿದೆ. ವಕೀಲ ಧರ್ಮಪಾಲ್ ಮತ್ತು ಜಯಕುಮಾರ್ ಹಿರೇಮಠ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. 22 ಶಾಸಕರಿಗೆ ಕಾರಣ ಕೇಳಿ ಹೈಕೋರ್ಟ್ ನೋಟೀಸ್ ನೀಡಿದ್ದು ಅದರಲ್ಲಿ ಸಚಿವ ಎಸ್.ಆರ್. ಪಾಟೀಲ್ ಮುಂತಾದವರೂ ಸೇರಿದ್ದಾರೆ. ಎಸ್. ಆರ್.ಪಾಟೀಲರು ತಂದೆ-ತಾಯಿ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದರು.
ಈ ಪ್ರಮಾಣವಚನವನ್ನು ಅಸಿಂಧು ಎಂದು ಘೋಷಿಸಿ ಪುನಃ ಪ್ರಮಾಣವಚನ ಸ್ವೀಕರಿಸಬೇಕೆಂದು ಧರ್ಮಪಾಲ್ ಕೋರಿದ್ದರು.ಸಂವಿಧಾನದ 188ನೇ ವಿಧಿಯಲ್ಲಿ ಪ್ರತಿಯೊಬ್ಬ ಶಾಸಕರೂ (ಎಂಎಲ್ಎ ಅಥವಾ ಎಂಎಲ್ಸಿ) ರಾಜ್ಯಪಾಲರ ಮುಂದೆ ಅಥವಾ ಅವರಿಂದ ನೇಮಕಗೊಂಡ ವ್ಯಕ್ತಿಯ ಮುಂದೆ ಪ್ರಮಾಣ ವಚನ ಸ್ವೀಕರಿಸಬೇಕೆಂದು ಕಡ್ಡಾಯಗೊಳಿಸಲಾಗಿದೆ.