Webdunia - Bharat's app for daily news and videos

Install App

ವಿಧಾನಸಭೆಯಲ್ಲಿ ಬಂಡೆ ಸಾವಿನ ಪ್ರಕರಣ ಪ್ರತಿಧ್ವನಿಸಿ ಗದ್ದಲ, ಗೌಜು

Webdunia
ಶುಕ್ರವಾರ, 24 ಜನವರಿ 2014 (12:49 IST)
PR
PR
ಬೆಂಗಳೂರು: ಬಂಡೆ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಬೇಕೆಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿದ್ದರಿಂದ ತೀವ್ರ ಗದ್ದಲ, ಗೊಂದಲದಲ್ಲಿ ಕಲಾಪ ಮುಳುಗಿತು. ಈ ಕುರಿತು ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ಸಿಐಡಿ ತನಿಖೆ ಈಗಾಗಲೇ ಪ್ರಾರಂಭವಾಗಿದೆ. ಸಿಐಡಿ ತನಿಖೆ ಪ್ರಾರಂಭವಾಗಿರುವಾಗ ಮಧ್ಯದಲ್ಲಿ ಸಿಐಡಿ ಬಗ್ಗೆ ನಂಬಿಕೆಯಿಲ್ಲ ಎಂದು ಹೇಳುವುದು ಸರಿಯಲ್ಲ. ಸಿಬಿಐ ಬಗ್ಗೆ ನಮಗೆ ವಿರೋಧವಿಲ್ಲ. ಯಾವ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಮತ್ತು ಯಾವ ಪ್ರಕರಣವನ್ನು ಸಿಐಡಿಗೆ ವಹಿಸಬೇಕು ಎಂಬ ವಿವೇಚನೆ ಸರ್ಕಾರಕ್ಕೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸಭೆಯಲ್ಲಿ ಖಾರವಾಗಿ ಮಾತನಾಡಿದರು.

ನಮಗೆ ಯಾರಿಗೂ ರಕ್ಷಣೆ ಕೊಡಬೇಕಾದ ಅನಿವಾರ್ಯತೆ ಇಲ್ಲ. ಅವರಿಗೆ ಎಷ್ಟೇ ಪ್ರಭಾವ ಇದ್ದರೂ ತಪ್ಪಿತಸ್ಥರಿಗೆ ಶಿಕ್ಷೆಯನ್ನು ಕೊಡ್ತೇವೆ. ಎಂದು ಸಿಎಂ ಹೇಳಿದರು. ಆದರೆ ಸರ್ಕಾರದ ಉತ್ತರ ಬಿಜೆಪಿಗೆ ತೃಪ್ತಿ ನೀಡಲಿಲ್ಲ. ನಿಮಗೆ ಸಿಬಿಐ ಅಂದ್ರೆ ಅಲರ್ಜಿ ಅಲ್ಲವೇ, ಒಂದೇ ಒಂದು ಕೇಸನ್ನೂ ಸಿಬಿಐಗೆ ವಹಿಸಲಿಲ್ಲ. ಈಗೇಕೆ ನಿಮಗೆ ಸಿಬಿಐ ಬಗ್ಗೆ ಮಮಕಾರ ಬಂದಿದೆ ಎಂದು ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದರು. ಸಿಎಂ ಉತ್ತರಕ್ಕೆ ವಿಪಕ್ಷ ಸದಸ್ಯರು ತೃಪ್ತರಾಗದೇ ಸದನದಲ್ಲಿ ಕೂಗಾಟ ನಡೆಸಿದ್ದರಿಂದ ಗದ್ದಲ, ಗೊಂದಲದಲ್ಲಿ ಸದನ ಮುಳುಗಿತು. ನಂತರ ಬಿಜೆಪಿ ಶಾಸಕರು ಸದನದಲ್ಲಿ ಧರಣಿ ನಡೆಸಿದ್ದರಿಂದ ಅರ್ಧ ಗಂಟೆ ಕಾಲ ಸದನವನ್ನು ಮುಂದೂಡಲಾಯಿತು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments