Select Your Language

Notifications

webdunia
webdunia
webdunia
webdunia

ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನವವಿವಾಹಿತೆ ಆತ್ಮಹತ್ಯೆ

ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನವವಿವಾಹಿತೆ ಆತ್ಮಹತ್ಯೆ
, ಶನಿವಾರ, 18 ಜನವರಿ 2014 (17:43 IST)
PR
PR
ಹಾಸನ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನವವಿವಾಹಿತೆ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದ ಪ್ರಗತಿ ನಗರದಲ್ಲಿ ನಡೆದಿದೆ. ಕೇವಲ 8 ತಿಂಗಳ ಹಿಂದೆ ಮದುವೆಯಾಗಿದ್ದ ಲತಾ ಬದುಕಿನಲ್ಲಿ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ವಿವಾಹವಾಗಿದ್ದಳು. ಆದರೆ ಈಗ ಕನಸುಗಳು ನುಚ್ಚುನೂರಾಗಿವೆ. ಲತಾಳಿಗೆ ಅವಳ ಗಂಡ ಮತ್ತು ಅತ್ತಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದರೆಂದು ಹೇಳಲಾಗಿದೆ.

ಪುತ್ರಿಗೆ ಯಾವುದೇ ತೊಂದರೆ ಕೊಡಬೇಡಿ ಎಂದು ಲತಾಳ ತಂದೆ ರಾಜಿ, ಪಂಚಾಯಿತಿ ಮಾಡಿದ್ದರು. ಆದರೆ ಯಾವುದೂ ಫಲ ನೀಡದೇ ಮತ್ತೆ ಕಿರುಕುಳ ನೀಡುತ್ತಿದ್ದರೆಂದು ಹೇಳಲಾಗಿತ್ತು. ಇದರಿಂದ ಲತಾಳಿಗೆ ಜೀವನವೇ ಬೇಸರವಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

Share this Story:

Follow Webdunia kannada