Select Your Language

Notifications

webdunia
webdunia
webdunia
webdunia

ವಂಚಕ ಗುರುಮೂರ್ತಿಗೆ ಈಗ ಸೆಂಟ್ರಲ್ ಜೈಲಿನ ಸೆರೆವಾಸ

ವಂಚಕ ಗುರುಮೂರ್ತಿಗೆ ಈಗ ಸೆಂಟ್ರಲ್ ಜೈಲಿನ ಸೆರೆವಾಸ
, ಸೋಮವಾರ, 27 ಜನವರಿ 2014 (17:20 IST)
PR
PR
ಸೃಷ್ಟಿ ಗ್ಲೋಬಲ್ ಮೆಡಿಕೇರ್ ಮುಖ್ಯಸ್ಥ ಕೆ.ಟಿ. ಗುರುಮೂರ್ತಿಗೆ 15 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದ್ದು ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ. ಈ ಕುರಿತು ಬೆಂಗಳೂರಿನ 5ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ. ಗುರುಮೂರ್ತಿ ನಾಲ್ಕು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ. ಪೊಲೀಸ್ ತನಿಖೆ ವೇಳೆ ಕೆಲವು ಮಾಹಿತಿ ಬಯಲಿಗೆ ಬಂದಿದ್ದು, ಸೃಷ್ಟಿ ಗ್ಲೋಬಲ್ ಕಂಪನಿ ನಡೆಸೋಕೆ ಆರೋಗ್ಯ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂಬ ಸಂಗತಿ ಬಯಲಾಗಿದೆ. ಗುರುಮೂರ್ತಿ

ಸೃಷ್ಟಿ ಕಂಪನಿಯ ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸಿದರು. ಶೇ. 100ರಷ್ಟು ಬಂಜೆತನ ನಿವಾರಣೆ ಮಾಡುವುದಾಗಿ ಹೇಳಿ ಅನೇಕ ಜನರಿಂದ ಲಕ್ಷಾಂತರ ರೂ. ವಂಚಿಸಿದ್ದ. ಶೇ. 25ರಷ್ಟು ಜನರಿಗೆ ಮಾತ್ರ ಬಂಜೆತನ ನಿವಾರಣೆಯಾಗಿದೆ.

Share this Story:

Follow Webdunia kannada