Select Your Language

Notifications

webdunia
webdunia
webdunia
webdunia

ಲಾಡ್‌ ಗಣಿ ದಾಳಿ ರಾಜಕೀಯ ಪ್ರೇರಿತ:ಸಿದ್ಧು ವಾಗ್ದಾಳಿ

ಲಾಡ್‌ ಗಣಿ ದಾಳಿ ರಾಜಕೀಯ ಪ್ರೇರಿತ:ಸಿದ್ಧು ವಾಗ್ದಾಳಿ
ಬೆಂಗಳೂರು , ಸೋಮವಾರ, 30 ಆಗಸ್ಟ್ 2010 (10:14 IST)
ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಮಾಲೀಕತ್ವದ ಗಣಿ ಕಂಪೆನಿ ಮೇಲಿನ ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಕಟುವಾಗಿ ಟೀಕಿಸಿದ್ದಾರೆ.

ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಿ. ಆದರೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು ಎನ್ನುವ ಕಾರಣಕ್ಕೆ ಲಾಡ್ ಅವರ ಗಣಿಯ ಮೇಲೆ ದಾಳಿ ನಡೆದಿರುವುದು ಹೊರನೋಟಕ್ಕೆ ಕಂಡುಬರುತ್ತದೆ. ಇದರಲ್ಲಿ ರೆಡ್ಡಿಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಗೋಹತ್ಯೆ ನಿಷೇಧ ವಿಷಯವನ್ನು ಕೋಮವಾದಿ ಬಿಜೆಪಿ ಸರಕಾರ ಚುನಾವಣೆಯಲ್ಲಿ ಬಳಸಿಕೊಳ್ಳುತ್ತಿದೆ.ಆದರೆ ಜನತೆ ಹಿಂದಿರುವ ಷಡ್ಯಂತ್ರವನ್ನು ಅರಿತಿದ್ದಾರೆ ಎಂದು ತಿಳಿಸಿದ್ದಾರೆ.

ಗುಲ್ಬರ್ಗಾ ಮತ್ತು ಕಡೂರಿನಲ್ಲಿ ನಡೆಯಲಿರುವ ಉಪಚುನಾವಣೆಗಳಲ್ಲಿ ವ್ಯಾಪಕ ಅವ್ಯವಹಾರಗಳು ಹಾಗೂ ಗಲಭೆಯನ್ನು ಸೃಷ್ಟಿಸುವ ಸಾಧ್ಯತೆಗಳಿರುವುದರಿಂದ ಚುನಾವಣೆ ಆಯೋಗ ಸೂಕ್ಷಪ್ರದೇಶಗಳೆಂದು ಘೋಷಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Share this Story:

Follow Webdunia kannada