Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ರುಂಡ ಕತ್ತರಿಸಿ ಛಿದ್ರ ಮಾಡಿದ್ರೆ ಸೋನಿಯಾ ಸುಮ್ಮನಿರುತ್ತಿದ್ದರೆ? ಈಶ್ವರಪ್ಪ ಪ್ರಶ್ನೆ

ರಾಹುಲ್ ಗಾಂಧಿ ರುಂಡ ಕತ್ತರಿಸಿ ಛಿದ್ರ ಮಾಡಿದ್ರೆ ಸೋನಿಯಾ ಸುಮ್ಮನಿರುತ್ತಿದ್ದರೆ? ಈಶ್ವರಪ್ಪ ಪ್ರಶ್ನೆ
, ಶನಿವಾರ, 29 ಮಾರ್ಚ್ 2014 (17:48 IST)
PR
PR
ಬೀದರ್: ಬೀದರ್ ಸಮಾವೇಶದಲ್ಲಿ ಈಶ್ವರಪ್ಪ ಪ್ರಚೋದನಾಕಾರಿ ಭಾಷಣ ಮಾಡಿದ ಘಟನೆ ನಡೆದಿದೆ. ಬಿಜೆಪಿ ಸಮಾವೇಶದಲ್ಲಿ ಮಾತನಾಡುತ್ತಿದ್ದ ಮುಖಂಡ ಈಶ್ವರಪ್ಪ ಪಾಕ್‌ನಿಂದ ದೇಶದ ಸೈನಿಕರ ಮೇಲೆ ಪ್ರತಿನಿತ್ಯ ದಾಳಿ ನಡೆಯುತ್ತಿರುವುದನ್ನು ಉಲ್ಲೇಖಿಸಿದರು. ಪಾಕ್ ಸೈನಿಕರು ನಮ್ಮ ದೇಶದ ಸೈನಿಕರ ರುಂಡ ಚೆಂಡಾಡುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಮೌನವಹಿಸಿದೆ. ಆ ಸೈನಿಕರ ಜೀವಕ್ಕೆ ಬೆಲೆ ಇಲ್ಲವೇ ಎಂದು ಈಶ್ವರಪ್ಪ ಖಾರವಾಗಿ ಪ್ರಶ್ನಿಸಿದರು. ಪಾಕಿಸ್ತಾನದ ಸೈನಿಕರು ರಾಹುಲ್ ಗಾಂಧಿ ರುಂಡ ಕತ್ತರಿಸಿ ಛಿದ್ರ ಛಿದ್ರ ಮಾಡಿದ್ರೆ ಸೋನಿಯಾ ಗಾಂಧಿ ಸುಮ್ಮನಿರುತ್ತಿದ್ದರೇ ಎಂದು ಈಶ್ವರಪ್ಪ ಕಿಡಿಕಾರಿದರು.

ನರೇಂದ್ರ ಮೋದಿ ಉತ್ತರಪ್ರದೇಶಕ್ಕೆ ಕಾಲಿರಿಸಿದರೆ ಕೊಚ್ಚಿಹಾಕಿ ತುಂಡು, ತುಂಡಾಗಿ ಕತ್ತರಿಸುವುದಾಗಿ ಪ್ರಚೋದನಾಕಾರಿ ಭಾಷಣ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಈಗ ಜೈಲು ಕಂಬಿ ಎಣಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರು ಪ್ರಚೋದನಾಕಾರಿ ಭಾಷಣ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.

Share this Story:

Follow Webdunia kannada