Select Your Language

Notifications

webdunia
webdunia
webdunia
webdunia

ರಾಜ್ಯಪಾಲ ಭಾರದ್ವಾಜ್‌ಗೆ ಸಮನ್ಸ್ ಕಳಿಸಿದ ಹೈಕೋರ್ಟ್

ರಾಜ್ಯಪಾಲ ಭಾರದ್ವಾಜ್‌ಗೆ ಸಮನ್ಸ್ ಕಳಿಸಿದ ಹೈಕೋರ್ಟ್
, ಶನಿವಾರ, 15 ಫೆಬ್ರವರಿ 2014 (15:56 IST)
PR
PR
ಬೆಂಗಳೂರು: ಮೈಸೂರು ವಿವಿ ವೈಸ್‌ಚಾನ್ಸಲರ್ ಹುದ್ದೆಗೆ ಫ್ರೊ.. ಕೆ.ಎಸ್. ರಂಗಪ್ಪ ಅವರ ನೇಮಕಾತಿ ಸಂಬಂಧಿಸಿದಂತೆ 10 ದಿನಗಳೊಳಗೆ ಖುದ್ದು ಅಥವಾ ವಕೀಲರ ಮೂಲಕ ಹಾಜರಾಗುವಂತೆ ಹೈಕೋರ್ಟ್ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಸಮನ್ಸ್ ಕಳಿಸಿದೆ. ಕುಲಪತಿ ನೇಮಕಾತಿ ಸಂಬಂಧಿಸಿ ಮೈಸೂರಿನ ಶೇಖರ್ ಅಯ್ಯರ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅಂಗೀಕರಿಸಿ ಕುಲಾಧಿಪತಿಗಳು ಅಭಿಪ್ರಾಯ ನೀಡಬೇಕು ಎಂದು ಸಮನ್ಸ್‌ನಲ್ಲಿ ಹೇಳಲಾಗಿದೆ.

ಫೆ. 13ನೇ ತಾರೀಖು ಸಮನ್ಸ್ ಜಾರಿಯಾಗಿದೆ. 10 ದಿನಗಳೊಳಗೆ ಖುದ್ದು ಅಥವಾ ವಕೀಲರ ಮೂಲಕ ಕೋರ್ಟ್‌ಗೆ ಹಾಜರಾಗಬೇಕು ಎಂದು ಸಮನ್ಸ್‌ನಲ್ಲಿ ಸೂಚಿಸಲಾಗಿದೆ.

Share this Story:

Follow Webdunia kannada